ವಿಕ್ರಂ ರಾಥೋಡ್ ಬ್ಯಾಟಿಂಗ್ ಕೋಚ್ ನೇಮಕಕ್ಕೆ ತಡೆ

Update: 2019-02-11 18:36 GMT

ಹೊಸದಿಲ್ಲಿ, ಫೆ.11: ಭಾರತದ ಮಾಜಿ ಆರಂಭಿಕ ಆಟಗಾರ ವಿಕ್ರಂ ರಾಥೋಡ್ ಅವರನ್ನು ಭಾರತ ಎ ಹಾಗೂ ಅಂಡರ್-19 ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಳಿಸಿರುವುದನ್ನು ತಡೆ ಹಿಡಿಯಲಾಗಿದೆ. ಅವರು ಎದುರಿಸುತ್ತಿರುವ ಸ್ವಹಿತಾಸಕ್ತಿ ಸಂಘರ್ಷ ವಿಚಾರವನ್ನು ಆಡಳಿತಾಧಿಕಾರಿ ಸಮಿತಿಯ ಗಮನಕ್ಕೆ ತರಲಾಗಿದೆ.

ರಾಥೋರ್ ವಯನಾಡ್‌ನಲ್ಲಿ ಭಾರತ ‘ಎ’ ತಂಡದೊಂದಿಗೆ ಕೆಲಸ ಆರಂಭಿಸಬೇಕಾಗಿತ್ತು. ಆದರೆ, ಇದೀಗ ಅವರ ನೇಮಕವನ್ನು ಅನಿರ್ದಿಷ್ಟ ಕಾಲ ತಡೆ ಹಿಡಿಯಲಾಗಿದೆ.

ರಾಥೋಡ್ ಈಗಿನ ಅಂಡರ್-19 ರಾಷ್ಟ್ರೀಯ ಆಯ್ಕೆಗಾರ ಆಶೀಶ್ ಕಪೂರ್ ಅವರ ಸಹೋದರ. ಹೀಗಾಗಿ ರಾಥೋರ್ ಆಯ್ಕೆಯು ಸ್ವಹಿತಾಸಕ್ತಿ ಸಂಘರ್ಷದ ಪ್ರಕರಣವಾಗಿ ಪರಿಗಣಿಸಲ್ಪಟ್ಟಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News