ಹಿಮಪಾತ: ಮತ್ತೊಬ್ಬ ಯೋಧನ ಮೃತದೇಹ ಪತ್ತೆ

Update: 2019-03-02 14:45 GMT

 ಶಿಮ್ಲ, ಮಾ.2: ಹಿಮಾಚಲಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಹಿಮಪಾತಕ್ಕೆ ಸಿಲುಕಿ ಕಳೆದ 10 ದಿನಗಳಿಂದ ನಾಪತ್ತೆಯಾಗಿರುವ ಐವರು ಯೋಧರಲ್ಲಿ ಒಬ್ಬ ಯೋಧನ ಮೃತದೇಹ ಶನಿವಾರ ಪತ್ತೆಯಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

 ಫೆಬ್ರವರಿ 20ರಂದು ಶಿಪ್ಕಿ ಲಾ ಗಡಿಭಾಗದಲ್ಲಿ ಸಂಭವಿಸಿದ ಹಿಮಪಾತದಡಿ ಸಿಲುಕಿ ಕಣ್ಮರೆಯಾಗಿದ್ದ ಆರು ಮಂದಿ ಯೋಧರಲ್ಲಿ 25 ವರ್ಷದ ರಾಜೇಶ್ ರಿಶಿ ಎಂಬಾತನ ಮೃತದೇಹ ಪತ್ತೆಯಾಗಿದೆ. ರಾಜೇಶ್ ಹಿಮಾಚಲಪ್ರದೇಶದ ಸೋಲನ್ ಜಿಲ್ಲೆಯ ನಿವಾಸಿ ಎಂದು ಕಿನ್ನೌರ್ ಜಿಲ್ಲೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಮತಾ ನೇಗಿ ತಿಳಿಸಿದ್ದಾರೆ.

ಹವಾಲ್ದಾರ್ ರಾಕೇಶ್ ಕುಮಾರ್ ಅವರ ಮೃತದೇಹವನ್ನು ದುರ್ಘಟನೆ ನಡೆದ ದಿನವೇ ಶೋಧ ಕಾರ್ಯ ನಡೆಸಿದ ತಂಡ ಪತ್ತೆ ಮಾಡಿತ್ತು. ಉಳಿದ ನಾಲ್ವರು ಯೋಧರನ್ನು ಪತ್ತೆಹಚ್ಚುವ ಕಾರ್ಯಾಚರಣೆಗೆ ಸುಮಾರು 500 ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News