ಪಕ್ಷಕ್ಕೆ ರಾಜೀನಾಮೆ ನೀಡಿದ ಬಿಜೆಪಿ ಸಂಸದ

Update: 2019-03-16 14:00 GMT

ಗುವಾಹಟಿ, ಮಾ.16: ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇರದ ಹಿನ್ನೆಲೆಯಲ್ಲಿ ಬಿಜೆಪಿಯ ಹಿರಿಯ ಮುಖಂಡ, ತೇಝ್‌ಪುರ ಕ್ಷೇತ್ರದ ಹಾಲಿ ಸಂಸದ ರಾಮ್‌ಪ್ರಸಾದ್ ವರ್ಮ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಆರೆಸ್ಸೆಸ್/ವಿಎಚ್‌ಪಿಯಲ್ಲಿ 15 ವರ್ಷ ಹಾಗೂ ಬಿಜೆಪಿಯಲ್ಲಿ 29 ವರ್ಷ ಸೇವೆ ಸಲ್ಲಿಸಿದ್ದೆ. ಆದರೆ ಹಾಲಿ ಸಂಸದ, ಅಸ್ಸಾಂ ಗೂರ್ಖ ಸಮ್ಮೇಳನದ ಅಧ್ಯಕ್ಷನಾಗಿರುವ ತನ್ನ ಹೆಸರನ್ನು ರಾಜ್ಯ ಬಿಜೆಪಿ ಸಮಿತಿ ಕಡೆಗಣಿಸಿರುವುದರಿಂದ ಅವಮಾನಗೊಂಡಿದ್ದೇನೆ ಎಂದು ಶರ್ಮ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ಬಿಜೆಪಿ ರಾಜ್ಯ ಸಮಿತಿ ಶುಕ್ರವಾರ ಅಂತಿಮಗೊಳಿಸಿ ಹೈಕಮಾಂಡ್‌ಗೆ ಸಲ್ಲಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಶರ್ಮ ಹೆಸರು ಸೇರಿಲ್ಲ. ಆದರೆ ಪ್ರಭಾವೀ ಮುಖಂಡ, ರಾಜ್ಯದಲ್ಲಿ ಸಚಿವರಾಗಿರುವ ಡಾ ಹಿಮಂತ ಬಿಸ್ವ ಶರ್ಮ ಅವರ ಹೆಸರಿದ್ದು ತೇಝ್‌ಪುರ ಕ್ಷೇತ್ರದಲ್ಲಿ ಈ ಬಾರಿ ಹಿಮಂತ ಬಿಸ್ವ ಕಣಕ್ಕಿಳಿಯುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News