ಆರೆಸ್ಸೆಸ್ ಕಾರ್ಯಕರ್ತನ ಮನೆ ಸಮೀಪ ಬಾಂಬ್ ಸ್ಫೋಟ: ಇಬ್ಬರು ಮಕ್ಕಳಿಗೆ ಗಂಭೀರ ಗಾಯ

Update: 2019-03-23 11:48 GMT

ಕಣ್ಣೂರು, ಮಾ.23: ಆರೆಸ್ಸೆಸ್ ಕಾರ್ಯಕರ್ತನೊಬ್ಬನ ಮನೆ ಸಮೀಪ ಬಾಂಬ್ ಸ್ಫೋಟಗೊಂಡ ಪರಿಣಾಮ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡ ಘಟನೆ ಕೇರಳ ಕಣ್ಣೂರು ಜಿಲ್ಲೆಯಲ್ಲಿ ನಡೆದಿದೆ.

ಘಟನೆಯಿಂದ ಆರೆಸ್ಸೆಸ್ ಕಾರ್ಯಕರ್ತ ಕದಿರುಮ್ಮಲ್ ಶಿಬು ಎಂಬಾತನ ಪುತ್ರ ಎಂ.ಎಸ್.ಗೋಕುಲ್(8) ಹಾಗೂ ಸ್ಥಳೀಯ ಶಿವಕುಮಾರ್ ಎಂಬಾತನ ಪುತ್ರ ಇಳಂಪಾವಿಲ್ ಕಾಂಜಿನ್ ಕುಮಾರ್(12) ಗಾಯಗೊಂಡ ಮಕ್ಕಳು.

ಶಿಬುವಿನ ಮನೆಯ ಮುಂದೆ ಹಕ್ಕಿಯ ಗೂಡಿನಲ್ಲಿಟ್ಟಿದ್ದ ಬಾಂಬ್ ಕೆಳಗೆ ಬಿದ್ದು ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಗೋಕುಲ್‌ನ ಜನನೇಂದ್ರಿಯ ಛಿದ್ರವಾಗಿದೆ.

ಪೊಲೀಸ್ ಹಾಗೂ ಬಾಂಬ್ ಸ್ಕ್ವಾಡ್ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News