ಬಿಜೆಪಿ ‘ಸಂಕಲ್ಪ್ ಪತ್ರ’ದ ಬದಲಿಗೆ ‘ಕ್ಷಮಾಪಣಾ ಪತ್ರ’ ಬಿಡುಗಡೆ ಮಾಡಬೇಕು: ಕಾಂಗ್ರೆಸ್

Update: 2019-04-08 08:43 GMT

ಹೊಸದಿಲ್ಲಿ, ಎ.8: ಬಿಜೆಪಿಯು ತನ್ನ ಪ್ರಣಾಳಿಕೆ ‘ಸಂಕಲ್ಪ್ ಪತ್ರ’ದ ಬದಲಿಗೆ ‘ಕ್ಷಮಾಪಣಾ ಪತ್ರ’ವನ್ನು ಬಿಡುಗಡೆ ಮಾಡಬೇಕು ಎಂದು ಕಾಂಗ್ರೆಸ್ ಹೇಳಿದೆ.

ಬಿಜೆಪಿಯು ಈ ಬಾರಿಯ ತನ್ನ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದ ನಂತರ ಕಾಂಗ್ರೆಸ್ ಈ ಪ್ರತಿಕ್ರಿಯೆ ನೀಡಿದೆ.

“ನಿರುದ್ಯೋಗದ ಮಾರಕ ಇಂಜೆಕ್ಷನ್ ಚುಚ್ಚಿದ್ದಕ್ಕಾಗಿ, ರೈತರ ಆತ್ಮಹತ್ಯೆಗಾಗಿ, ಉದ್ಯಮಗಳನ್ನು ಮುಚ್ಚಿ ಯುವಜನರನ್ನು ನಿರುದ್ಯೋಗಿಗಳನ್ನಾಗಿ ಮಾಡಿದ್ದಕ್ಕಾಗಿ ಬಿಜೆಪಿಯು ಕ್ಷಮಾಪಣಾ ಪತ್ರ ಬಿಡುಗಡೆಗೊಳಿಸಬೇಕು” ಎಂದು ಕಾಂಗ್ರೆಸ್ ನಾಯಕ ಜೈವೀರ್ ಶೇರ್ಗಿಲ್ ತಿಳಿಸಿದ್ದಾರೆ.

“ಬಿಜೆಪಿಯು ಜನರಿಗೆ ಮೋಸ ಮಾಡಿದೆ, 2014ರಲ್ಲಿ ಅವರು ನೀಡಿದ್ದ ಆಶ್ವಾಸನೆಗಳ ಬಗ್ಗೆ ಅವರು ಉತ್ತರಿಸಬೇಕು” ಎಂದು ಇದೇ ಸಂದರ್ಭ ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News