ತುಲಾಭಾರ ನಡೆಸುತ್ತಿದ್ದಾಗ ತಕ್ಕಡಿ ತುಂಡಾಗಿ ಶಶಿ ತರೂರ್ ಗೆ ಗಾಯ

Update: 2019-04-15 12:46 GMT

ತಿರುವನಂತಪುರ,ಎ.15: ವಿಷು ಅಂಗವಾಗಿ ಸೋಮವಾರ ಸ್ಥಳೀಯ ದೇವಸ್ಥಾನದಲ್ಲಿ ತುಲಾಭಾರ ನೆರವೇರಿಸುತ್ತಿದ್ದಾಗ ತಕ್ಕಡಿ ತುಂಡಾಗಿ ತಿರುವನಂತಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ  ಹಾಗೂ ಸಂಸದ  ಶಶಿ ತರೂರ್  ತಲೆಗೆ ಗಾಯವಾಗಿದೆ.

ತರೂರ್ ಅವರು ತುಲಾಭಾರ ನೆರವೇರಿಸಲು ತಕ್ಕಡಿಯಲ್ಲಿ ಕುಳಿತಿದ್ದಾಗ ಆಕಸ್ಮಿಕವಾಗಿ ತಕ್ಕಡಿ  ತುಂಡಾಗಿ ಕೆಳಗೆ ಬಿದ್ದು ಅವರು ಗಾಯಗೊಂಡರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಗಾಯಕ್ಕೆ ಆರು ಹೊಲಿಗೆ ಹಾಕಲಾಗಿದೆ, ಅವರು ಅಪಾಯದಿಂದ ಪಾರಾಗಿದ್ದಾರೆ. ಆದರೆ ವಿಶ್ರಾಂತಿ ಪಡೆಯುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಶಶಿ ತರೂರ್ ತಿರುವನಂತಪುರ ಕ್ಷೇತ್ರದಿಂದ ಮೂರನೇ ಬಾರಿ ಲೋಕಸಭೆಗೆ ಆಯ್ಕೆ ಬಯಸಿದ್ದಾರೆ. ಬಿಜೆಪಿ ಅಭ್ಯರ್ಥಿ ಕುಮ್ಮನಮ್ ರಾಜಶೇಖರನ್ ಅವರಿಗೆ ಪ್ರಮುಖ ಎದುರಾಳಿಯಾಗಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News