ಬಿಜೆಪಿ 280ರ ಗುರಿ ತಲುಪುವುದು ಕಷ್ಟ: ಶಿವಸೇನೆ ನಾಯಕ ರಾವತ್

Update: 2019-05-07 13:27 GMT

ಮುಂಬೈ,ಮೇ 7: ಲೋಕಸಭೆಯಲ್ಲಿ ತನ್ನ ಪಕ್ಷಕ್ಕೆ ಸ್ಪಷ್ಟ ಬಹುಮತಕ್ಕೆ ಕೊರತೆಯುಂಟಾಗಬಹುದು ಎಂಬ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ ಮಾಧವ ಅವರ ಹೇಳಿಕೆಯನ್ನು ಮಂಗಳವಾರ ಪ್ರತಿಧ್ವನಿಸಿದ ಹಿರಿಯ ಶಿವಸೇನಾ ನಾಯಕ ಸಂಜಯ್ ರಾವತ್ ಅವರು,ಮುಂದಿನ ಸರಕಾರ ರಚನೆಗೆ ಅದು ತನ್ನ ಮಿತ್ರಪಕ್ಷಗಳನ್ನು ನೆಚ್ಚಿಕೊಳ್ಳಬೇಕಾಗುತ್ತದೆ ಎಂದು ಹೇಳಿದರು.

2014ರ ಚುನಾವಣೆಯಲ್ಲಿ ಸಾಧಿಸಿದ್ದಂತೆ ಈ ಬಾರಿ ಬಿಜೆಪಿ 280ರ ಗುರಿ ತಲುಪುವುದು ಕಷ್ಟ ಎಂಬಂತೆ ಕಂಡು ಬರುತ್ತಿದೆ. ಆದರೆ ನಮ್ಮ ಎನ್‌ಡಿಎ ಪರಿವಾರವು ಬಹುಮತವನ್ನು ಗಳಿಸಲಿದೆ ಎಂದ ಅವರು,ರಾಮ ಮಾಧವ್ ಹೇಳಿರುವುದು ಸರಿಯಾಗಿದೆ. ಎನ್‌ಡಿಎ ಮುಂದಿನ ಸರಕಾರವನ್ನು ರಚಿಸುತ್ತದೆ ಮತ್ತು ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿರಲಿದೆ ಎಂದರು.

 ನರೇಂದ್ರ ಮೋದಿಯವರು ಮತ್ತೆ ಪ್ರಧಾನಿಯಾದರೆ ಶಿವಸೇನೆಗೆ ಸಂತಸವಾಗುತ್ತದೆ ಎಂದು ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News