ಪ್ರತಿಭಟನೆ ಕೈಬಿಡಲು ವೈದ್ಯರ ಒಪ್ಪಿಗೆ: ಮಮತಾ ಮಾತುಕತೆ ಫಲಪ್ರದ

Update: 2019-06-17 13:51 GMT

ಹೊಸದಿಲ್ಲಿ, ಜೂ.17: ಮುಷ್ಕರನಿರತ ವೈದ್ಯರ ಜೊತೆ ಮಮತಾ ಬ್ಯಾನರ್ಜಿಯವರ ಮಾತುಕತೆ ಫಲಪ್ರದವಾಗಿದ್ದು, ಮುಷ್ಕರ ಕೊನೆಗೊಳಿಸುತ್ತೇವೆ ಎಂದು ವೈದ್ಯರು ಸೂಚನೆ ನೀಡಿದ್ದಾರೆ.

ಆದರೆ ಇದುವರೆಗೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಮಮತಾ ಬ್ಯಾನರ್ಜಿಯವರಿಗೆ ಒಳ್ಳೆಯ ಉದ್ದೇಶಗಳಿವೆ ಎಂದು ವೈದ್ಯರು ಹೇಳಿದ್ದಾರೆ. ಮಾಧ್ಯಮಗಳ ಮುಂದೆಯೇ ಮಾತುಕತೆ ನಡೆದಿತ್ತು.

“ನಮ್ಮ ವೈದ್ಯರ ಬಗ್ಗೆ ನಾವು ಹೆಮ್ಮೆ ಹೊಂದಿದ್ದೇವೆ. ನೀವು ನಮ್ಮ ಸರಕಾರದ ಮೇಲೆ ಕೋಪಗೊಂಡಿರಬಹುದು. ಆದರೆ ಕೆಲಸಕ್ಕೆ ಮರಳಿ” ಎಂದು ಮಮತಾ ವಿನಂತಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News