ಭುವನೇಶ್ವರ್‌ಗೆ ಗಾಯ

Update: 2019-06-17 18:55 GMT

ಮ್ಯಾಂಚೆಸ್ಟರ್, ಜೂ.17:ವೇಗದ ಬೌಲರ್ ಭುವನೇಶ್ವರ್ ಕುಮಾರ್ ಗಾಯದ ಸಮಸ್ಯೆಯಿಂದಾಗಿ ಮುಂಬರುವ ಕನಿಷ್ಠ ಎರಡು ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ಪಾಕಿಸ್ತಾನ ವಿರುದ್ಧ ರವಿವಾರ ನಡೆದ ವಿಶ್ವಕಪ್ ಪಂದ್ಯದ ಬಳಿಕ ಭಾರತದ ನಾಯಕ ವಿರಾಟ್ ಕೊಹ್ಲಿ ದೃಢಪಡಿಸಿದ್ದಾರೆ.

ಪಾಕಿಸ್ತಾನ ವಿರುದ್ಧ ಪಂದ್ಯದಲ್ಲಿ ತಾನೆಸೆದ ಮೂರನೇ ಓವರ್‌ನಲ್ಲಿ ಕುಮಾರ್‌ಗೆ ಗಾಯದ ಸಮಸ್ಯೆ ಕಾಣಿಸಿಕೊಂಡಿತ್ತು. ಮೋಡ ಕವಿದ ವಾತಾವರಣದಲ್ಲೂ ಮುಹಮ್ಮದ್ ಶಮಿ ಪಾಕ್ ವಿರುದ್ಧ ಪಂದ್ಯದಲ್ಲಿ ಆಡಿರಲಿಲ್ಲ. ಇದೀಗ ಕುಮಾರ್ ಗಾಯಗೊಂಡಿರುವ ಕಾರಣ ಮುಂಬರುವ ಪಂದ್ಯಗಳಲ್ಲಿ ಶಮಿ ಆಡಲಿದ್ದಾರೆ.

‘‘ಭುವನೇಶ್ವರ್‌ಗೆ ಸ್ವಲ್ಪ ಗಾಯವಾಗಿದೆ. ಅವರು ಎರಡರಿಂದ ಮೂರು ಪಂದ್ಯಗಳಲ್ಲಿ ಆಡುವುದಿಲ್ಲ. ಈ ಟೂರ್ನಿಯಲ್ಲಿ ಮತ್ತೆ ಆಡಲಿದ್ದಾರೆ. ಅವರು ನಮಗೆ ಅತ್ಯಂತ ಮುಖ್ಯ ಬೌಲರ್ ಆಗಿದ್ದಾರೆ’’ ಎಂದು ಪಾಕ್ ವಿರುದ್ಧ 89 ರನ್‌ಗಳಿಂದ ಜಯ ಸಾಧಿಸಿದ ಬಳಿಕ ಕೊಹ್ಲಿ ಪ್ರತಿಕ್ರಿಯಿಸಿದರು.

ಭುವನೇಶ್ವರ್ ಗಾಯಗೊಂಡಿರುವುದು ಭಾರತಕ್ಕೆ ಎರಡನೇ ಹಿನ್ನಡೆಯಾಗಿದೆ. ಆರಂಭಿಕ ಆಟಗಾರ ಶಿಖರ್ ಧವನ್ ಹೆಬ್ಬೆರಳ ಗಾಯದಿಂದಾಗಿ ಈಗಾಗಲೇ ಕೆಲವು ಪಂದ್ಯಗಳಿಂದ ದೂರ ಉಳಿದಿದ್ದಾರೆ.

‘‘ಧವನ್ ಕೆಲವು ವಾರಗಳಲ್ಲಿ ಹೆಬ್ಬೆರಳಿನ ಗಾಯದಿಂದ ಚೇತರಿಸಿಕೊಳ್ಳಲಿದ್ದಾರೆ. ಲೀಗ್ ಹಂತದ ಕೊನೆಯಲ್ಲಿ, ಸೆಮಿ ಫೈನಲ್‌ಗೆ ಮೊದಲು ತಂಡಕ್ಕೆ ವಾಪಸಾಗುವ ವಿಶ್ವಾಸವಿದೆ’’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News