ಬಂಟ್ವಾಳದ ರೈತನನ್ನು ಪ್ರಶಂಸಿಸಿದ ‘ಮಹೀಂದ್ರಾ’ ಗ್ರೂಪ್ ಅಧ್ಯಕ್ಷ ಆನಂದ್ ಮಹೀಂದ್ರಾ

Update: 2019-06-20 11:53 GMT

ಹೊಸದಿಲ್ಲಿ, ಜೂ.20: ಅಡಿಕೆ ಮರ ಏರುವ ಮೋಟಾರ್ ಬೈಕ್ ಕಂಡುಹಿಡಿದ ಬಂಟ್ವಾಳದ ರೈತ ಗಣಪತಿ ಭಟ್ ಬಗ್ಗೆ ಮಹೀಂದ್ರಾ ಗ್ರೂಪ್ ಚೇರ್ ಮ್ಯಾನ್ ಆನಂದ್ ಮಹೀಂದ್ರಾ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ, “ಇದು ಪರಿಣಾಮಕಾರಿ ಮಾತ್ರವಲ್ಲ, ಕಡಿಮೆ ತೂಕದಲ್ಲಿ ಸೊಗಸಾಗಿ ವಿನ್ಯಾಸಗೊಳಿಸಲಾಗಿದೆ” ಎಂದಿದ್ದು, ಮಹೀಂದ್ರಾ & ಮಹೀಂದ್ರಾದ ಕೃಷಿ ಸಲಕರಣೆ ಘಟಕದ ಮುಖ್ಯಸ್ಥರನ್ನು ಟ್ಯಾಗ್ ಮಾಡಿ, “ನಾವು ಮಿ. ಭಟ್ ಅವರ ಆವಿಷ್ಕಾರವನ್ನು ಮಾರ್ಕೆಟ್ ಮಾಡಬಹುದೇ ಎಂದು ಪರಿಶೀಲಿಸಿ” ಎಂದಿದ್ದಾರೆ.

ಪಣೋಲಿಬೈಲ್ ಸಮೀಪದ ಕೋಮಾಲಿಯ ಪ್ರಗತಿಪರ ಕೃಷಿಕ ಗಣಪತಿ ಭಟ್ ಈ ಯಂತ್ರವನ್ನು ಕಂಡುಹಿಡಿದಿದ್ದರು. ಸುಲಭವಾಗಿ ಅಡಿಕೆ ಮರ ಏರುವ ಈ ಯಂತ್ರ ಕೃಷಿಕರಿಗೆ ಅತ್ಯಂತ ಸಹಕಾರಿಯಾಗಲಿದೆ. ಈ ಬಗ್ಗೆ ವಾರ್ತಾಭಾರತಿ ವಿಶೇಷ ವರದಿ ಪ್ರಕಟಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News