ಟಿಟಿಡಿ ಅಧ್ಯಕ್ಷರಾಗಿ ಜಗನ್ಮೋಹನ್ ರೆಡ್ಡಿ ಮಾವ ನಿಯೋಜನೆ

Update: 2019-06-22 15:03 GMT

ಅಮರಾವತಿ/ತಿರುಪತಿ, ಜೂ. 22: ಇಲ್ಲಿಗೆ ಸಮೀಪದ ತಿರುಮಲ ವೆಂಕಟೇಶ್ವರ ದೇವಾಲಯದ ಆಡಳಿತ ನಡೆಸುತ್ತಿರುವ ತಿರುಮಲ ತಿರುಪತಿ ದೇವಸ್ವಂ ಟ್ರಸ್ಟ್ ಬೋರ್ಡ್‌ನ ಅಧ್ಯಕ್ಷರಾಗಿ ಮಾಜಿ ಸಂಸದ ಹಾಗೂ ವೈಎಸ್‌ಆರ್‌ಸಿಪಿ ನಾಯಕ ವೈ.ವಿ. ಸುಬ್ಬಾ ರೆಡ್ಡಿ ಅವರನ್ನು ಆಂಧ್ರಪ್ರದೇಶ ಸರಕಾರ ಶುಕ್ರವಾರ ನಿಯೋಜಿಸಿದೆ. ಮಂಡಳಿಯ ಇತರ ಸದಸ್ಯರನ್ನು ಶೀಘ್ರದಲ್ಲಿ ನಿಯೋಜಿಸಲಾಗುವುದು ಎಂದು ವಿಶೇಷ ಮುಖ್ಯ ಕಾರ್ಯದರ್ಶಿ (ಕಂದಾಯ-ದತ್ತಿ) ಮನಮೋಹನ್ ಆದೇಶದಲ್ಲಿ ತಿಳಿಸಿದ್ದಾರೆ.

ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರ ಮಾವ ವೈ.ವಿ. ಸುಬ್ಬಾ ರೆಡ್ಡಿ. ಟಿಡಿಪಿ ನಾಯಕ ಪುಟ್ಟ ಸುಧಾಕರ್ ಯಾದವ್ ಟಿಟಿಡಿ ಅಧ್ಯಕ್ಷ ಸ್ಥಾನಕ್ಕೆ ಗುರುವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು. ಇದರಿಂದ ತೆರವಾದ ಸ್ಥಾನಕ್ಕೆ ವೈ.ವಿ. ಸುಬ್ಬಾ ರೆಡ್ಡಿ ನಿಯೋಜಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News