ಬಿಜೆಪಿಗೆ ಸೇರ್ಪಡೆಯಾದ ಚಂದ್ರಬಾಬು ನಾಯ್ಡು ಪಕ್ಷದ ವಕ್ತಾರ ದಿನಕರ್

Update: 2019-06-27 17:41 GMT

ಹೈದರಾಬಾದ್,ಜೂ.27: ತೆಲುಗುದೇಶಂ ಪಕ್ಷದ ರಾಷ್ಟ್ರೀಯ ವಕ್ತಾರ ಲಂಕಾ ದಿನಕರ್ ಅವರು ಬುಧವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಟಿಡಿಪಿಯ ನಾಲ್ವರು ರಾಜ್ಯಸಭಾ ಸದಸ್ಯರು ಜೂನ್ 20ರಂದು ಬಿಜೆಪಿಗೆ ಪಕ್ಷಾಂತರಗೊಂಡ ಒಂದು ವಾರದ ಬಳಿಕ ಈ ಬೆಳವಣಿಗೆಯುಂಟಾಗಿದೆ.

ದೇಶವನ್ನು ನಿರ್ಮಿಸಲು ಪ್ರಧಾನಿ ಮೋದಿ ಹಾಗೂ ಅಮಿತ್‌ ಶಾ ಜೀ ಅವರು ತೋರಿಸಿದ ದಾರಿಯಲ್ಲಿ ಮುನ್ನಡೆಯಲು ಬಯಸಿದ್ದೇನೆ. ಆಂಧ್ರಪ್ರದೇಶದಲ್ಲಿ ಬಿಜೆಪಿಯನ್ನು ಬೆಳೆಸಲು ನಾನು ಅತ್ಯುತ್ತಮವಾಗಿ ಶ್ರಮಿಸಲಿದ್ದೇನೆ ಎಂದವರು ಹೇಳಿದ್ದಾರೆ.

ದಿನಕರ್ ಅವರನ್ನು ಬಿಜೆಪಿಯ ಕಾರ್ಯಕಾರಿ ಅಧ್ಯಕ್ಷ ಜೆ.ಪಿ. ನಡ್ಡಾ ಪಕ್ಷಕ್ಕೆ ಬರಮಾಡಿಕೊಂಡರು. ಟಿಡಿಪಿಯನ್ನು ತ್ಯಜಿಸುವ ತನ್ನ ನಿರ್ಧಾವನ್ನು ಲಂಕಾ ನಾಯ್ಡು ಪಕ್ಷದ ಅಧ್ಯಕ್ಷ ಚಂದ್ರಬಾಬು ನಾಯ್ಡು ಅವರಿಗೆ ಪತ್ರದ ಮೂಲಕ ತಿಳಿಸಿದ್ದಾರೆಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ.

 ಈ ಮಧ್ಯೆ ಅನಗಾನಿ ಸತ್ಯಪ್ರಸಾದ್ ಸೇರಿದಂತೆ ಟಿಡಿಪಿ ಮೂವರು ಶಾಸಕರು ಕೂಡಾ ಹೊಸದಿಲ್ಲಿಯಲ್ಲಿ ಬಿಜೆಪಿಯ ಹಿರಿಯ ನಾಯಕರ ಜೊತೆ ಸಂಪರ್ಕದಲ್ಲಿದ್ದಾರೆಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News