ಹರ್ಯಾಣದ ಕಾಂಗ್ರೆಸ್ ವಕ್ತಾರ ವಿಕಾಸ್ ಗುಂಡಿಟ್ಟು ಹತ್ಯೆ

Update: 2019-06-27 06:27 GMT

ಫರಿದಾಬಾದ್, ಜೂ.27: ಹರ್ಯಾಣ ಕಾಂಗ್ರೆಸ್ ವಕ್ತಾರ ವಿಕಾಸ್ ಚೌಧರಿ ಅವರನ್ನು ದುಷ್ಕರ್ಮಿಯೊಬ್ಬ ಗುರುವಾರ ಬೆಳಗ್ಗೆ ಫರಿದಾಬಾದ್‌ನಲ್ಲಿ ಗುಂಡಿಟ್ಟು ಸಾಯಿಸಿರುವ ಘಟನೆ ವರದಿಯಾಗಿದೆ.

  ಫರಿದಾಬಾದ್‌ನಲ್ಲಿ ಎಂದಿನಂತೆ ಬೆಳಗ್ಗೆ 9 ಗಂಟೆಗೆ ಜಿಮ್ ಮಾಡಲು ಕಾರಿನಲ್ಲಿ ಬರುತ್ತಿದ್ದ ವಿಕಾಸ್ ಚೌಧರಿಯನ್ನು ಮತ್ತೊಂದು ಕಾರಿನಲ್ಲಿ ಹಿಂಬಾಲಿಸಿಕೊಂಡ ಬಂದ ಹಂತಕ ಅವರು ಕಾರಿನಿಂದ ಕೆಳಗೆ ಇಳಿದ ತಕ್ಷಣ 10ಕ್ಕೂ ಅಧಿಕ ಬುಲೆಟ್‌ಗಳನ್ನು ಹಾರಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ಈ ಹಿಂದೆಯೂ ವಿಕಾಸ್‌ರನ್ನು ಹಿಂಬಾಲಿಸಿಕೊಂಡು ಬಂದಿರುವ ಕಾರಣ ಇದೊಂದು ವೈಯಕ್ತಿಕ ಕಾರಣವಾಗಿ ಗೋಚರಿಸುತ್ತಿದೆ. ಇಡೀ ಘಟನೆಯು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಘಟನೆಯ ಕುರಿತು ತನಿಖೆ ಆರಂಭವಾಗಿದೆ ಎಂದು ಪೊಲೀಸ್ ಅಧಿಕಾರಿ ಸುಬೆ ಸಿಂಗ್ ತಿಳಿಸಿದ್ದಾರೆ.

‘‘ಗಂಭೀರ ಗಾಯಗೊಂಡಿದ್ದ ವಿಕಾಸ್‌ರನ್ನು ತಕ್ಷಣವೇ ಆಸ್ಪತ್ರೆಗೆ ಕರೆ ತರಲಾಗಿತ್ತು. ವೈದ್ಯರು ಅವರನ್ನು ಉಳಿಸಿಕೊಳ್ಳಲು ಎಲ್ಲ ಪ್ರಯತ್ನ ನಡೆಸಿದ್ದರು. ಆದರೆ, ಅವರ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ’’ ಎಂದು ವೈದ್ಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News