ಗೋಕಳ್ಳತನ ಶಂಕೆಯಲ್ಲಿ ಮೂವರ ಥಳಿಸಿ ಹತ್ಯೆ

Update: 2019-07-19 07:16 GMT

ಪಾಟ್ನಾ, ಜು.19: ದನಗಳನ್ನು ಕದ್ದ ಆರೋಪ ಹೊರಿಸಿ ಗುಂಪೊಂದು ಮೂವರು ವ್ಯಕ್ತಿಗಳನ್ನು ಥಳಿಸಿ ಕೊಂದ ಘಟನೆ ಬಿಹಾರದ ಸಾರನ್ ಜಿಲ್ಲೆಯ ಬನಿಯಾಪುರ ಗ್ರಾಮದಿಂದ ಇಂದು ಮುಂಜಾನೆ ವರದಿಯಾಗಿದೆ.

ದನಗಳನ್ನು ಪಿಕ್-ಅಪ್ ವಾಹನದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದಾರೆಂಬ ಗುಮಾನಿಯಿಂದ 4:30ರ ಸುಮಾರಿಗೆ ಮೂವರನ್ನೂ ದುಷ್ಕರ್ಮಿಗಳು ತಡೆ ಹಿಡಿದು ಅವರು ಕುಸಿದು ಬೀಳುವ ತನಕ ನಿರ್ದಯವಾಗಿ ಥಳಿಸಿದ್ದರು. ಘಟನೆಯ ಬಗ್ಗೆ ತಿಳಿದು ಸ್ಥಳಕ್ಕೆ ಧಾವಿಸಿದ ಪೊಲೀಸರು ಮೂವರನ್ನೂ ಆಸ್ಪತ್ರೆಗೆ ಸಾಗಿಸಿದರೂ ಅವರು ಅದಾಗಲೇ ಮೃತಪಟ್ಟಿದ್ದಾರೆಂದು ವೈದ್ಯರು ಘೋಷಿಸಿದ್ದರು.

ಘಟನೆ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಗುಂಪು ಥಳಿತಕ್ಕೆ ಬಲಿಯಾದ ಮೂವರು ಈ ಹಿಂದೆ ಯಾವುದಾದರೂ ಅಪರಾಧ ಪ್ರಕರಣದಲ್ಲಿ ಶಾಮೀಲಾಗಿದ್ದಾರೆಯೇ ಎಂದು ಇನ್ನಷ್ಟೇ ದೃಢಪಡಿಸಬೇಕಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News