ಆರ್‌ಟಿಐ ಕಾಯ್ದೆಯಲ್ಲಿ ಬದಲಾವಣೆ: ಮೋದಿ ಸರಕಾರ ಜನರನ್ನು ವಂಚಿಸಿದೆ ಎಂದ ಅಣ್ಣಾ ಹಝಾರೆ

Update: 2019-07-23 18:25 GMT

ರಾಲೆಗಣ ಸಿದ್ಧಿ(ಮಹಾರಾಷ್ಟ್ರ),ಜು.23: ಕೇಂದ್ರ ಸರಕಾರವು ಮಾಹಿತಿ ಹಕ್ಕು ಕಾಯ್ದೆಯಲ್ಲಿ ಬದಲಾವಣೆಗಳನ್ನು ಮಾಡುವ ಮೂಲಕ ದೇಶದ ಜನರನ್ನು ವಂಚಿಸಿದೆ ಎಂದು ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಝಾರೆ ಅವರು ಆರೋಪಿಸಿದ್ದಾರೆ.

ತನ್ನ ಆರೋಗ್ಯವು ಚೆನ್ನಾಗಿಲ್ಲ,ಆದರೆ ಆರ್‌ಟಿಐ ಕಾಯ್ದೆಯ ಪಾವಿತ್ರ್ಯವನ್ನು ರಕ್ಷಿಸಲು ದೇಶದ ಜನತೆ ಬೀದಿಗಿಳಿದರೆ ಅವರೊಂದಿಗೆ ಸೇರಲು ತಾನು ಸಿದ್ಧವಾಗಿದ್ದೇನೆ ಎಂದು ಮಂಗಳವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಝಾರೆ ತಿಳಿಸಿದರು.

ಆರ್‌ಟಿಐ ಕಾಯ್ದೆಗೆ ತಿದ್ದುಪಡಿಗಳನ್ನು ಲೋಕಸಭೆಯು ಜು.22ರಂದು ಅಂಗೀಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News