ಸಿದ್ಧಾರ್ಥ್ ಪತ್ತೆಗೆ ನೆರವಾಗುವಂತೆ ರಾಜ್ಯ ಬಿಜೆಪಿ ಸಂಸದರಿಂದ ಗೃಹ ಸಚಿವರಿಗೆ ಮನವಿ

Update: 2019-07-30 15:49 GMT

ಹೊಸದಿಲ್ಲಿ,ಜು.30: ಶೋಭಾ ಕರಂದ್ಲಾಜೆ ಅವರ ನೇತೃತ್ವದಲ್ಲಿ ಮಂಗಳವಾರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾದ ಕರ್ನಾಟಕದ ಬಿಜೆಪಿ ಸಂಸದರ ನಿಯೋಗವು ಮಂಗಳೂರಿನಿಂದ ನಾಪತ್ತೆಯಾಗಿರುವ ಕೆಫೆ ಕಾಫಿ ಡೇ ಸ್ಥಾಪಕ ವಿ.ಜಿ.ಸಿದ್ಧಾರ್ಥ ಅವರ ಪತ್ತೆಗಾಗಿ ನೆರವಾಗುವಂಂತೆ ಕೋರಿಕೊಂಡಿದೆ.

 ಪ್ರದೇಶದಲ್ಲಿ ಸುರಿಯುತ್ತಿರುವ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಶೋಧಕಾರ್ಯ ವಿಳಂಬಗೊಳ್ಳುತ್ತಿದೆ. ಆದ್ದರಿಂದ ತಟ ರಕ್ಷಣಾ ಪಡೆ,ಕೇಂದ್ರೀಯ ಪಡೆಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಒದಗಿಸುವ ಮೂಲಕ ರಾಜ್ಯ ಸರಕಾರಕ್ಕೆ ನೆರವಾಗುವಂತೆ ಕರಂದ್ಲಾಜೆ ಸಚಿವರನ್ನು ಕೋರಿಕೊಂಡರು.

ಬಿಜೆಪಿ ಸಂಸದರಾದ ನಳಿನಕುಮಾರ ಕಟೀಲ್,ಕರಡಿ ಸಂಗಣ್ಣ,ಭಗವಂತ ಖೂಬಾ,ಬಿ.ಸಿ ಗದ್ದಿಗೌಡರ ಮತ್ತು ವೈ.ದೇವೆಂದ್ರಪ್ಪ ಅವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News