ಭಾರತದ ಯೋಚನೆ ಮೇಲುಗೈ ಸಾಧಿಸಲು ಧ್ವನಿ ಎತ್ತಬೇಕಾಗಿದೆ: ಮನಮೋಹನ್ ಸಿಂಗ್
Update: 2019-08-12 17:37 GMT
ಹೊಸದಿಲ್ಲಿ, ಆ.12:ಭಾರತ ತೀವ್ರ ಬಿಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದೆ. ಕೆಟ್ಟ ಶಕ್ತಿಗಳನ್ನು ಎದುರಿಸಲು ಸರಿಯಾಗಿ ಯೋಚಿಸುವ ವ್ಯಕ್ತಿಗಳ ಅಗತ್ಯವಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಮಾಜಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಹೇಳಿದ್ದಾರೆ.
ಕಾಶ್ಮೀರದಲ್ಲಿ ವಿಧಿ 370ನ್ನು ರದ್ದುಪಡಿಸಿರುವ ಕುರಿತು ಪ್ರತಿಕ್ರಿಯಿಸಿದ ಸಿಂಗ್,‘‘ಭಾರತದ ಜನರ ಯೋಚನೆ ದೀರ್ಘ ಸಮಯ ಮೇಲುಗೈ ಸಾಧಿಸಲು ಧ್ವನಿಎತ್ತುವ ಅಗತ್ಯವಿದೆ'' ಎಂದು ಹೇಳಿದರು.