ರಾಯ್‌ಪುರದಲ್ಲಿ ಎನ್‌ಕೌಂಟರ್: ಐವರು ಮಾವೋಗಳು ಸಾವು

Update: 2019-08-24 19:21 GMT

 ರಾಯ್‌ಪುರ, ಆ. 26: ಬಸ್ತಾರ್ ವಲಯದ ನಾರಾಯಣಪುರ ಜಿಲ್ಲೆಯ ಅಬುಝ್‌ಮಾಡ್‌ನ ಅರಣ್ಯದಲ್ಲಿ ಪೊಲೀಸರು ಶನಿವಾರ ಬೆಳಗ್ಗೆ ನಡೆಸಿದ ಎನ್‌ಕೌಂಟರ್‌ನಲ್ಲಿ ಐವರು ಮಾವೋವಾದಿಗಳು ಹತರಾಗಿದ್ದಾರೆ.

ಎನ್‌ಕೌಂಟರ್ ನಡೆದ ಸ್ಥಳದಿಂದ ಆಟೋಮ್ಯಾಟಿಕ್ ರೈಫಲ್ ಹಾಗೂ ಇತರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರಿಗೆ ಗಾಯಗಳಾಗಿವೆ ಎಂದು ಅವರು ತಿಳಿಸಿದ್ದಾರೆ.

ಖಚಿತ ಮಾಹಿತಿಯಂತೆ ಚತ್ತೀಸ್‌ಗಢ ಪೊಲೀಸರ ತಂಡ ನಾರಾಯಣಪುರದ ಧುರ್ವೇಡಾ ಅರಣ್ಯದಲ್ಲಿರುವ ಮಾವೋವಾದಿಗಳ ಶಿಬಿರದ ಮೇಲೆ ದಾಳಿ ನಡೆಸಿತು. ಈ ಸಂದರ್ಭ ಮಾವೋವಾದಿಗಳು ಗುಂಡು ಹಾರಿಸಿದರು. ಪೊಲೀಸರು ಪ್ರತಿ ದಾಳಿ ನಡೆಸಿದರು. ಗುಂಡಿನ ಚಕಮಕಿ 90 ನಿಮಿಷಗಳ ಕಾಲ ನಡೆಯಿತು ಎಂದು ಪೊಲೀಸ್ ಮಹಾ ನಿರ್ದೇಶಕ ಡಿ.ಎಂ. ಅವಸ್ಥಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News