ಪುತ್ರಿಗೆ ಕಿರುಕುಳ ನೀಡಿದ ಆರೋಪ: ತಂದೆ, ಪುತ್ರನಿಂದ ಆರೆಸ್ಸೆಸ್ ಕಾರ್ಯಕರ್ತನ ಹತ್ಯೆ

Update: 2019-09-16 14:39 GMT

ಮುಝಫ್ಫರನಗರ್, ಸೆ.16: ತನ್ನ ಪುತ್ರಿಗೆ ಕಿರುಕುಳ ನೀಡಿದ ಆರೆಸ್ಸೆಸ್ ಕಾರ್ಯಕರ್ತನನ್ನು ವ್ಯಕ್ತಿಯೊಬ್ಬ ತನ್ನ ಪುತ್ರ ಹಾಗೂ ಸೋದರನ ಜೊತೆ ಸೇರಿ ಕೊಲೆಗೈದ ಘಟನೆ ಉತ್ತರ ಪ್ರದೇಶದ ಮುಝಫ್ಫರನಗರ್ ಜಿಲ್ಲೆಯಿಂದ ವರದಿಯಾಗಿದೆ.

ಆರೆಸ್ಸೆಸ್ ಕಾರ್ಯಕರ್ತ ಪಂಕಜ್ ಎಂಬಾತ ಕರ್ವಾರ ಗ್ರಾಮದಲ್ಲಿ ಶನಿವಾರ ಕೊಲೆಗೀಡಾಗಿದ್ದ. ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದೆ.

ಪಂಕಜ್ ತನ್ನ ಪುತ್ರಿಗೆ ಕಿರುಕುಳ ನೀಡುತ್ತಿದ್ದುದನ್ನು ಸಹಿಸಲಾಗದೆ ತಾನು, ಪುತ್ರ ಮೋನು ಹಾಗೂ ಸೋದರ ಪ್ರಮೋದ್ ಜತೆಗೂಡಿ ಆತನನ್ನು ಕೊಲೆಗೈದಿದ್ದೇವೆ ಎಂದು ಬಂಧಿತ ಕವರ್ಪಾಲ್ ಹೇಳಿಕೆ ನೀಡಿದ್ದಾನೆ.

ಕವರ್ಪಾಲ್ ಜತೆ ಆತನ ಪುತ್ರನನ್ನೂ ರವಿವಾರ ಸಂಜೆ ಬಂಧಿಸಲಾಗಿದೆ. ಕೊಲೆಗೆ ಬಳಸಿದ ಆಯುಧವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಲೆಮರೆಸಿಕೊಂಡಿರುವ ಪ್ರಕರಣದ ಮೂರನೇ ಆರೋಪಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News