ವಿಜಯ್ ಹಝಾರೆಗೆ ಮುಂಬೈ ತಂಡ: ಅಂಡರ್-19 ಏಶ್ಯ ಕಪ್ ಹೀರೋ ಅಥರ್ವ ಅಂಕೊಲೇಕರ್‌ಗೆ ಸ್ಥಾನ

Update: 2019-09-17 18:34 GMT

ಮುಂಬೈ, ಸೆ.17: ಮುಂಬರುವ ವಿಜಯ್ ಹಝಾರೆ ಏಕದಿನ ಟೂರ್ನಮೆಂಟ್‌ಗೆ 17 ಸದಸ್ಯರನ್ನು ಒಳಗೊಂಡ ಮುಂಬೈ ತಂಡವನ್ನು ಆಯ್ಕೆ ಮಾಡಲಾಗಿದ್ದು, ಅಂಡರ್-19 ಏಶ್ಯಕಪ್‌ನಲ್ಲಿ ಭಾರತದ ಗೆಲುವಿನ ರೂವಾರಿಯಾಗಿದ್ದ ಅಥರ್ವ ಅಂಕೊಲೇಕರ್‌ಗೆ ಸ್ಥಾನ ನೀಡಲಾಗಿದೆ. ಹಾಲಿ ಚಾಂಪಿಯನ್ ಮುಂಬೈ ತಂಡ ಎ ಗುಂಪಿನಲ್ಲಿದ್ದು, ಎಲ್ಲ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಮುಂಬೈ ಕ್ರಿಕೆಟ್ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ಮಂಗಳವಾರ ತಂಡವನ್ನು ಪ್ರಕಟಿಸಿದೆ.

ಎಡಗೈ ಸ್ಪಿನ್ನರ್ ಅಂಕೋಲೇಕರ್ ಶನಿವಾರ ನಡೆದ ಅಂಡರ್-19 ಏಶ್ಯಕಪ್ ಫೈನಲ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಐದು ವಿಕೆಟ್ ಗೊಂಚಲು ಕಬಳಿಸಿ ಭಾರತ ತನ್ನಲ್ಲೇ ಏಶ್ಯಕಪ್ ಉಳಿಸಿಕೊಳ್ಳುವಂತೆ ಮಾಡಿದರು. ಭಾರತದ ಆಟಗಾರ ಶ್ರೇಯಸ್ ಅಯ್ಯರ್, ಸರ್ಫರಾಝ್ ಖಾನ್, ಪ್ರತಿಭಾವಂತ ಬ್ಯಾಟ್ಸ್‌ಮನ್ ಯಶಸ್ವಿ ಜೈಸ್ವಾಲ್ ಮುಂಬೈ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಮುಂಬೈ ತಂಡ: ಶ್ರೇಯಸ್ ಅಯ್ಯರ್(ನಾಯಕ), ಸೂರ್ಯ ಕುಮಾರ ಯಾದವ್(ಉಪ ನಾಯಕ), ಜೈ ಬಿಸ್ತ್, ಆದಿತ್ಯ ತಾರೆ, ಸರ್ಫರಾಝ್ ಖಾನ್, ಶಿವಂ ದುಬೆ, ಶುಭಂ ರಂಜನೆ, ಏಕನಾಥ್ ಕೇರ್ಕರ್, ಧವಳ್ ಕುಲಕರ್ಣಿ, ತುಷಾರ್ ದೇಶಪಾಂಡೆ, ಶಮ್ಸ್ ಮುಲಾನಿ, ಅಥರ್ವ ಅಂಕೋಲೇಕರ್, ಶಾರ್ದೂಲ್ ಠಾಕೂರ್, ಸಿದ್ದೇಶ್ ಲಾಡ್, ಯಶಸ್ವಿ ಜೈಸ್ವಾಲ್, ಕೃತಿಕ್ ಹನಗವಾಡಿ ಹಾಗೂ ಶಶಾಂಕ್ ಅತರ್ಡೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News