ಕೊಲೆ ಆರೋಪಿಯನ್ನು ಪಕ್ಷಕ್ಕೆ ಬರಮಾಡಿಕೊಂಡ ಬಿಜೆಪಿ: ಭಾರೀ ಆಕ್ರೋಶ

Update: 2019-10-05 13:59 GMT

ಹೊಸದಿಲ್ಲಿ, ಅ.5: ಕೊಲೆ ಆರೋಪಿ ಶಶಿ ಭೂಷಣ್ ಮೆಹ್ತಾ ಬಿಜೆಪಿ ಸೇರ್ಪಡೆಯು ರಾಂಚಿಯಲ್ಲಿ ಹಲವರ ಕಣ್ಣು ಕೆಂಪಾಗಿಸಿದೆ. ಜೆಎಂಎಂ ನಾಯಕರಾಗಿರುವ ಶಶಿ ಭೂಷಣ್ ಈಗ ನಿರ್ದೇಶಕರಾಗಿರುವ ಶಾಲೆಯೊಂದರ ವಾರ್ಡನ್ ಸುಚಿತ್ರಾ ಮೆಹ್ತಾ ಕೊಲೆ ಪ್ರಕರಣದಲ್ಲಿ ಶಶಿ ಭೂಷಣ್ ಆರೋಪಿಯಾಗಿದ್ದಾರೆ.

“ನಮಗೆ ನ್ಯಾಯ ಬೇಕು. ಬಿಜೆಪಿಯು ರಾಜ್ಯ ಮತ್ತು ಕೇಂದ್ರದಲ್ಲಿ ಆಡಳಿತ ಪಕ್ಷ. ನನ್ನ ತಾಯಿಯ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ವ್ಯಕ್ತಿಯೊಬ್ಬನ ಸೇರ್ಪಡೆ ಬಗ್ಗೆ ಬಿಜೆಪಿ ನಾಯಕರು ಗಮನಹರಿಸಬೇಕು” ಎಂದು ಸುಚಿತ್ರಾ ಮೆಹ್ತಾರ ಪುತ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.

“ನನ್ನ ಚಿಕ್ಕಮ್ಮ ಮತ್ತು ನಾನು ಪ್ರತಿಭಟಿಸುತ್ತಿದ್ದೆವು. ಆ ಸಂದರ್ಭ ಪಕ್ಷದ ಕಾರ್ಯಕರ್ತರು ಬಂದು ನಮ್ಮಲ್ಲಿದ್ದ ಬ್ಯಾನರ್ ಗಳನ್ನು ಕಿತ್ತು, ನನ್ನ ಚಿಕ್ಕಮ್ಮನಿಗೆ ಥಳಿಸಿದರು. ಘಟನೆ ನಡೆದಾಗ ಬಿಜೆಪಿ ರಾಜಕಾರಣಿಗಳು ಮತ್ತು ಪೊಲೀಸರು ನಿಂತು ನೋಡುತ್ತಿದ್ದರೇ ಹೊರತು, ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ” ಎಂದವರು ಹೇಳಿದ್ದಾಗಿ ವರದಿಯಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News