ಪಟೇಲ್‌ಗೆ ಶ್ರೀನಿವಾಸನ್ ಬಣ ಬೆಂಬಲ

Update: 2019-10-15 05:50 GMT

ಬ್ರಿಜೇಶ್ ಪಟೇಲ್‌ಗೆ ತಮಿಳುನಾಡಿನ ಪ್ರಭಾವಿ ಎನ್.ಶ್ರೀನಿವಾಸನ್ ಬಣದ ಬೆಂಬಲವಿತ್ತು‘‘ಬ್ರಿಜೇಶ್ ಪಟೇಲ್‌ರನ್ನು ಅಧ್ಯಕ್ಷ ಸ್ಥಾನಕ್ಕೆ ನೇಮಿಸಲು ಎನ್.ಶ್ರೀನಿವಾಸನ್ ಬಣ ಸಕ್ರಿಯವಾಗಿ ಲಾಬಿ ನಡೆಸಿತ್ತು. ಆದರೆ ಈ ಕುರಿತು ಪ್ರಬಲ ಪ್ರತಿರೋಧ ವ್ಯಕ್ತವಾಯಿತು. ಸೌರವ್ ನೂತನ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುವುದಕ್ಕೆ ನಮಗೆ ತುಂಬಾ ಸಂತೋಷವಾಗಿದೆ’’ ಎಂದು ಈಶಾನ್ಯ ಘಟಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ಭಾರತದ ಮಾಜಿ ಕೋಚ್ ಅಂಶುಮಾನ್ ಗಾಯಕ್ವಾಡ್ ಅವರು ಕೀರ್ತಿ ಆಝಾದ್‌ರನ್ನು ಸೋಲಿಸಿ ಬಿಸಿಸಿಐನ 9 ಸದಸ್ಯರ ಅಪೆಕ್ಸ್ ಕೌನ್ಸಿಲ್‌ಗೆ ಐಸಿಎ ಪುರುಷರ ಪ್ರತಿನಿಧಿಯಾಗಿ ಆಯ್ಕೆಯಾದರು. ಶಾಂತಾ ರಂಗಸ್ವಾಮಿ ಈ ಮೊದಲೇ ಐಸಿಎ ಮಹಿಳಾ ಪ್ರತಿನಿಧಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News