ಗಂಗುಲಿಗೆ ಅಖ್ತರ್ ಬೆಂಬಲ

Update: 2019-10-15 18:37 GMT

ಲಾಹೋರ್,ಅ.15: ಬಿಸಿಸಿಐನ ನೂತನ ಅಧ್ಯಕ್ಷರಾಗಲು ಸಜ್ಜಾಗುತ್ತಿರುವ ಮಾಜಿ ನಾಯಕ ಸೌರವ್ ಗಂಗುಲಿ ಕುರಿತು ಭಾರತ ಮಾತ್ರವಲ್ಲ ನೆರೆಯ ಪಾಕಿಸ್ತಾನದಲ್ಲೂ ಬೆಂಬಲ ವ್ಯಕ್ತವಾಗಿದೆ. ಪಾಕ್ ಬೌಲಿಂಗ್ ಲೆಜೆಂಡ್ ಶುಐಬ್ ಅಖ್ತರ್ ಮಂಗಳವಾರ ಗಂಗುಲಿ ಅವರನ್ನು ಬಿಸಿಸಿಐ ಅಧ್ಯಕ್ಷರನ್ನಾಗಿ ಆಯ್ಕೆ ಮಡುವ ನಿರ್ಧಾರವನ್ನು ಸ್ವಾಗತಿಸಿದರು. ಭಾರತೀಯ ಕ್ರಿಕೆಟ್‌ಗೆ ಬದಲಾವಣೆ ತಂದಿರುವವರ ಪೈಕಿ ಗಂಗುಲಿ ಪ್ರಮುಖರು. 1997-98ಕ್ಕಿಂತ ಮೊದಲು ಯಾರೂ ಕೂಡ ಭಾರತ ತಂಡ ಪಾಕಿಸ್ತಾನವನ್ನು ಸೋಲಿಸುತ್ತದೆ ಎಂದು ಯೋಚಿಸಿರಲಿಲ್ಲ. ಸೌರವ್ ಗಂಗುಲಿ ಭಾರತದ ನಾಯಕನಾಗುವ ತನಕ ಭಾರತ ತಂಡ ಪಾಕಿಸ್ತಾನವನ್ನು ಮಣಿಸಲು ಶಕ್ತವಾಗಿತ್ತು ಎಂದು ನನಗೂ ಅನಿಸಿರಲಿಲ್ಲ್ಲ. ಗಂಗುಲಿ ಭಾರತೀಯ ಕ್ರಿಕೆಟನ್ನು ಮಾನಸಿಕವಾಗಿ ಬದಲಿಸಿದ್ದರು. ಅವರು ತಂಡಕ್ಕೆ ಪ್ರತಿಭಾವಂತರನ್ನು ಆಯ್ಕೆ ಮಾಡಿದ್ದರು ಎಂದು ಅಖ್ತರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News