ಸುಖ್ ದೇವ್, ರಾಜ್ ಗುರು, ಭಗತ್ ಸಿಂಗ್ ರಿಗೆ 'ಭಾರತ ರತ್ನ' ನೀಡಿ: ಅಸದುದ್ದೀನ್ ಒವೈಸಿ ಆಗ್ರಹ
Update: 2019-10-18 13:08 GMT
ಔರಂಗಾಬಾದ್, ಅ.18: ಸಾವರ್ಕರ್ ಗೆ 'ಭಾರತ ರತ್ನ' ನೀಡಬೇಕು ಎನ್ನುವ ಬಿಜೆಪಿ ನಾಯಕರ ಮಾತಿಗೆ ವಿರೋಧ ವ್ಯಕ್ತಪಡಿಸಿರುವ ಎಐಎಂಐಎಂ ನಾಯಕ ಅಸದುದ್ದೀನ್ ಒವೈಸಿ, ಭಾರತ ರತ್ನ ನೀಡುವುದೇ ಆದರೆ ಸ್ವಾತಂತ್ರ್ಯ ಹೋರಾಟಗಾರರಾದ ಸುಖ್ ದೇವ್, ರಾಜ್ ಗುರು ಮತ್ತು ಭಗತ್ ಸಿಂಗ್ ರಿಗೆ ನೀಡಲಿ ಎಂದು ಹೇಳಿದರು.
ಔರಂಗಾಬಾದ್ ನಲ್ಲಿ ಮಾತನಾಡಿದ ಅವರು, "ನೀವು ನಿಜವಾಗಿಯೂ ಯಾರಿಗಾದರೂ ಭಾರತ ರತ್ನ ನೀಡಲು ಬಯಸುವುದಾದರೆ ಸುಖ್ ದೇವ್, ರಾಜ್ ಗುರು ಮತ್ತು ಭಗತ್ ಸಿಂಗ್ ರಿಗೆ ನೀಡಿ" ಎಂದರು.
"ಕಪೂರ್ ಸಮಿತಿ ವರದಿಯ ಪ್ರಕಾರ ಮಹಾತ್ಮಾ ಗಾಂಧೀಜಿ ಹತ್ಯೆ ಪ್ರಕರಣದಲ್ಲಿ ಸಾವರ್ಕರ್ ಸಂಚು ರೂಪಿಸಿದ ವ್ಯಕ್ತಿ. ಅದಕ್ಕಾಗಿ ನಾವು ಸಾವರ್ಕರ್ ಗೆ ಭಾರತ ರತ್ನವನ್ನು ವಿರೋಧಿಸುತ್ತಿದ್ದೇವೆ. ರಾಷ್ಟ್ರಪಿತನ ಹತ್ಯೆಯ ಸಂಚು ರೂಪಿಸಿದ ವ್ಯಕ್ತಿಗೆ ಭಾರತ ರತ್ನ ನೀಡುವುದು ಹೇಗೆ?" ಎಂದು ಅವರು ಪ್ರಶ್ನಿಸಿದರು.