12ನೆ ತರಗತಿಯ ವಿದ್ಯಾರ್ಥಿಯನ್ನು ಥಳಿಸಿ ಕೊಂದ ಪ್ರಿಯತಮೆಯ ಸಂಬಂಧಿಕರು

Update: 2019-10-19 14:06 GMT
Photo: ndtv.com

ಗುವಾಹಟಿ, ಅ.19: ತ್ರಿಪುರಾದ ಗೋಮತಿ ಜಿಲ್ಲೆಯ ಗ್ರಾಮವೊಂದರಲ್ಲಿ ಯುವತಿಯೊಬ್ಬಳ ಮನೆಯಲ್ಲಿದ್ದ 17 ವರ್ಷದ ಯುವಕನನ್ನು ಗುಂಪೊಂದು ಥಳಿಸಿ ಕೊಂದ ಘಟನೆ ನಡೆದಿದೆ.

ಮೃತ ಯುವಕ ರಿಪನ್ ಸರ್ಕಾರ್ 12ನೇ ತರಗತಿ ವಿದ್ಯಾರ್ಥಿಯಾಗಿದ್ದು, ತನ್ನ ಮಾವನ ಜತೆಗೆ ವಾಸಿಸುತ್ತಿದ್ದ. ಗ್ರಾಮಸ್ಥರ ಪ್ರಕಾರ ರಿಪನ್ ಆ ಯುವತಿಯನ್ನು ಪ್ರೀತಿಸುತ್ತಿದ್ದ. ಯುವತಿಯ ಸಂಬಂಧಿಕರು ಆತನನ್ನು ತಮ್ಮ ಮನೆಗೆ ಕರೆದು ಆತನಿಗೆ ಥಳಿಸಿದ್ದರು. ಈ ಸುದ್ದಿಯನ್ನು ಗ್ರಾಮಸ್ಥರಿಂದ ತಿಳಿದು ಆತನ ಮಾವ ಧಾವಿಸಿ ಬಂದರೂ ರಕ್ಷಿಸಲು ಸಾಧ್ಯವಾಗಲಿಲ್ಲ. ಗಂಭೀರ ಗಾಯಗೊಂಡಿದ್ದ ಯುವಕನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆತ ಅದಾಗಲೇ ಮೃತಪಟ್ಟಿದ್ದಾನೆಂದು ವೈದ್ಯರು ಘೋಷಿಸಿದರು.

ಹತ್ಯೆಗೆ ಸಂಬಂಧಿಸಿದಂತೆ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಅವರ ಪೈಕಿ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News