ಸಿಂಗಾಪುರ: ಪಟಾಕಿ ಸಿಡಿಸಿರುವುದಕ್ಕೆ ಭಾರತೀಯನ ವಿರುದ್ಧ ಮೊಕದ್ದಮೆ

Update: 2019-12-02 18:08 GMT
ಸಾಂದರ್ಭಿಕ ಚಿತ್ರ

ಸಿಂಗಾಪುರ, ಡಿ. 2: ಸಿಂಗಾಪುರದ ಲಿಟಲ್ ಇಂಡಿಯಾ ಪ್ರದೇಶದಲ್ಲಿ ಅಕ್ಟೋಬರ್‌ನಲ್ಲಿ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸಿರುವುದಕ್ಕಾಗಿ ಭಾರತ ಮೂಲದ ವ್ಯಕ್ತಿಯೊಬ್ಬರ ವಿರುದ್ಧ ಸೋಮವಾರ ಮೊಕದ್ದಮೆ ದಾಖಲಾಗಿದೆ.

ಅಪಾಯಕಾರಿ ಪಟಾಕಿ ಕಾಯ್ದೆಯಡಿ ಸಿವಸರವಣನ್ ಸುಪ್ಪಯ್ಯ ಮುರುಗನ್ ಎಂಬವರ ವಿರುದ್ಧ ಆರೋಪ ಹೊರಿಸಲಾಗಿದೆ. ಯಾವುದೇ ಅಪಾಯಕಾರಿ ಪಟಾಕಿಗಳನ್ನು ಹೊಂದುವುದನ್ನು ಅಥವಾ ಸುಡುವುದನ್ನು ಈ ಕಾಯ್ದೆ ನಿಷೇಧಿಸುತ್ತದೆ.

ಈ ಕಾಯ್ದೆಯಡಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆಯಾಗಬಹುದು ಅಥವಾ 7,306 ಡಾಲರ್ (ಸುಮಾರು 5.23 ಲಕ್ಷ ರೂಪಾಯಿ) ದಂಡ ವಿಧಿಸಬಹುದು ಅಥವಾ ಎರಡನ್ನೂ ವಿಧಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News