×
Ad

"ಸಿಎಎಯಲ್ಲಿ ಮುಸ್ಲಿಮರನ್ನು ಏಕೆ ಸೇರಿಸಿಲ್ಲ ?''

Update: 2019-12-24 11:33 IST

ಕೋಲ್ಕತಾ, ಡಿ.24: ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಬೆಂಬಲಿಸಿ  ಕೋಲ್ಕತ್ತಾದಲ್ಲಿ ಬಿಜೆಪಿಯ ಬೃಹತ್ ರ್ಯಾಲಿ ನಡೆದ ಕೆಲವೇ ಗಂಟೆಗಳ ನಂತರ, ಪಶ್ಚಿಮ ಬಂಗಾಳದ ಬಿಜೆಪಿ ಉಪಾಧ್ಯಕ್ಷ ಮತ್ತು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಮೊಮ್ಮಗ ಚಂದ್ರ ಕುಮಾರ್ ಬೋಸ್ ಅವರು ಕಾನೂನಿನ ವಿರುದ್ಧ ಪ್ರಶ್ನೆಗಳನ್ನು ಎತ್ತಿದ್ದಾರೆ, ಇದರಲ್ಲಿ ಮುಸ್ಲಿಂರನ್ನು ಏಕೆ ಸೇರಿಸಿಲ್ಲ  ಎಂದು ಪ್ರಶ್ನಿಸಿದ್ದಾರೆ.

ನರೇಂದ್ರ ಮೋದಿ ಸರ್ಕಾರದ ನಿರ್ಧಾರ "ಪಾರದರ್ಶಕವಾಗಿ" ಇರುವಂತೆ ಒತ್ತಾಯಿಸಿದ ಬೋಸ್ ಸೋಮವಾರ, ಯಾವುದೇ ಒಂದು ಧರ್ಮಕ್ಕೆ ಸಂಬಂಧಿಸದಿದ್ದರೆ ನಾವು ಏಕೆ ಕೇಳುತ್ತಿದ್ದೇವೆ – ಇದರಲ್ಲಿ ಹಿಂದೂ, ಸಿಖ್, ಬೌದ್ಧ, ಕ್ರಿಶ್ಚಿಯನ್ನರು, ಪಾರ್ಸಿಗಳು ಮತ್ತು ಜೈನರು ಮಾತ್ರ ಯಾಕೆ ಮುಸ್ಲಿಂರನ್ನು ಯಾಕೆ ಸೇರಿಸಬಾರದು  ?   ಸಿಎಎ  ಪಾರದರ್ಶಕವಾಗಿರಲಿ. ” ಎಂದು ಟ್ವೀಟ್ ಮಾಡಿದ್ದಾರೆ.

ಇನ್ನೊಂದು  ಟ್ವೀಟ್‌ನಲ್ಲಿ, "ಭಾರತವನ್ನು ಸಮೀಕರಿಸಬೇಡಿ ಅಥವಾ ಅದನ್ನು ಬೇರೆ ಯಾವುದೇ ರಾಷ್ಟ್ರದೊಂದಿಗೆ ಹೋಲಿಸಬೇಡಿ- ಇದು ಎಲ್ಲಾ ಧರ್ಮಗಳು ಮತ್ತು ಸಮುದಾಯಗಳಿಗೆ ಮುಕ್ತ ರಾಷ್ಟ್ರವಾಗಿದೆ" ಎಂದು ಹೇಳಿದ್ದಾರೆ.

ಮುಸ್ಲಿಂರನ್ನು ಸೇರಿಸುವುದರಲ್ಲಿ ಯಾವುದೇ ಹಾನಿ ಇಲ್ಲ ಎಂದು ಅಭಿಪ್ರಾಯಪಟ್ಟಿರುವ ಅವರು ಏಕೆಂದರೆ "ಮುಸ್ಲಿಮರು ತಮ್ಮ ತಾಯ್ನಾಡಿನಲ್ಲಿ ಕಿರುಕುಳಕ್ಕೆ ಒಳಗಾಗದಿದ್ದರೆ ಅವರು ಭಾರತಕ್ಕೆ ಬರುವುದಿಲ್ಲ". "ಆದಾಗ್ಯೂ, ಇದು ಸಂಪೂರ್ಣವಾಗಿ ನಿಜವಲ್ಲ- ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ ವಾಸಿಸುವ ಬಲೂಚ್ ಬಗ್ಗೆ ಏನು? ಪಾಕಿಸ್ತಾನದ ಅಹ್ಮದಿಯಾ ಬಗ್ಗೆ  ನಿಲುವು ಏನು? ” ಎಂದು ಅವರು ಪ್ರಶ್ನಿಸಿದ್ದಾರೆ

ಸಿಎಎ ಬೆಂಬಲಿಸಿ ಬಿಜೆಪಿ ನಾಯಕರು  ಸೋಮವಾರ ಪಶ್ಚಿಮ ಬಂಗಾಳದಲ್ಲಿ ಭಾರಿ ಬೆಂಬಲ ವ್ಯಕ್ತಪಡಿಸಿ ಮೆರವಣಿಗೆ ನಡೆಸಿದ  ಬೆನ್ನಲ್ಲೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ.

ಸೋಮವಾರ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ದಿಲೀಪ್ ಘೋಷ್ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯಾ ಸೇರಿದಂತೆ ಬಿಜೆಪಿ ಹಿರಿಯ ಮುಖಂಡರು, ಬಿಜೆಪಿ ಕಾರ್ಯಕಾರಿ ಅಧ್ಯಕ್ಷ ಜೆ ಪಿ ನಡ್ಡಾ ನೇತೃತ್ವದಲ್ಲಿ ಕೋಲ್ಕತ್ತಾದ ಸುಬೋಧ್ ಮುಲ್ಲಿಕ್ ಚೌಕದಿಂದ ಶ್ಯಾಂಬಜಾರ್‌ಗೆ  ತನಕ ಮೆರವಣಿಗೆ ನಡೆಸಿದ್ದರು.

ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ನಡ್ಡಾ ಅವರು  ಹೊಸ ಪೌರತ್ವ ಕಾನೂನಿನ ಬಗ್ಗೆ ಮೋದಿ ಸರ್ಕಾರಕ್ಕೆ "ಧನ್ಯವಾದಗಳು" ಎಂದು ಹೇಳಿದ್ದರು .

ಸಿಎಎ ಪೌರತ್ವವನ್ನು ನೀಡುತ್ತದೆ ಮತ್ತು ವಿರೋಧ ಪಕ್ಷಗಳು ಹೇಳುವಂತೆ ಪೌರತ್ವವನ್ನು ಹಿಂಪಡೆಯುವುದಿಲ್ಲ ಎಂದು ಅವರು ಹೇಳಿದರು. "ಮಮತಾ ಬ್ಯಾನರ್ಜಿ ಯಾವಾಗಲೂ ರಾಷ್ಟ್ರೀಯ ಹಿತಾಸಕ್ತಿಗಿಂತ ತನ್ನ ರಾಜಕೀಯಕ್ಕೆ ಆದ್ಯತೆ ನೀಡುತ್ತಿರುವುದು ದುರದೃಷ್ಟಕರ. ಟಿಎಂಸಿ ಮತ್ತು ಇತರ ವಿರೋಧ ಪಕ್ಷಗಳು ತಿದ್ದುಪಡಿ ಮಾಡಿದ ಕಾನೂನಿನ ಬಗ್ಗೆ ಜನರನ್ನು ದಾರಿತಪ್ಪಿಸುತ್ತಿವೆ" ಎಂದು ಅವರು ಹೇಳಿದರು.

"ಅವರು ರಾಷ್ಟ್ರೀಯ ಹಿತಾಸಕ್ತಿಗಿಂತ ತಮ್ಮ ಮತ ಬ್ಯಾಂಕ್ ಅನ್ನು ಭದ್ರಪಡಿಸಿಕೊಳ್ಳುವುದರ ಬಗ್ಗೆ ಮಾತ್ರ ತಲೆಕೆಡಿಸಿಕೊಳ್ಳುತ್ತಾರೆ. ತಮ್ಮ ದೇಶ ಮತ್ತು ಗೌರವವನ್ನು ಉಳಿಸಲು ಈ ದೇಶಕ್ಕೆ ಬರುವ ನಿರಾಶ್ರಿತರ ನೋವು ಮತ್ತು ಸಂಕಟದ ಬಗ್ಗೆ ಅವರು ತಲೆಕೆಡಿಸಿಕೊಳ್ಳುವುದಿಲ್ಲ" ಎಂದು ಅವರು ಹೇಳಿದರು.

ಪೌರತ್ವ ಕಾನೂನಿನ ವಿರುದ್ಧದ ಪ್ರತಿಭಟನೆಯ ಸಂದರ್ಭದಲ್ಲಿ ರಾಜ್ಯವನ್ನು ಬೆಚ್ಚಿಬೀಳಿಸಿದ ಹಿಂಸಾಚಾರದ ಬಗ್ಗೆ ಪ್ರತಿಕ್ರಿಯೆ ನೀಡಿದ ನಡ್ಡಾ  ರಾಜ್ಯ ಸರಕಾರದ  "ನಿಷ್ಕ್ರಿಯತೆ" ಯಿಂದ ನಡೆದಿದೆ ಎಂದು ಕುಟುಕಿದ್ದಾರೆ.

ಸಿಎಎಗೆ ಸಾರ್ವಜನಿಕರ ಬೆಂಬಲವಿದೆ ಎಂದು ಪ್ರತಿಪಾದಿಸಿದ ನಡ್ಡಾ ಅವರು ಮಮತಾ ಬ್ಯಾನರ್ಜಿ ಜನಸಾಮಾನ್ಯರ ಹಿತಾಸಕ್ತಿಗೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ.  ಆದರೆ ರಾಜ್ಯದ ಜನರು ಹೊಸ ಕಾನೂನನ್ನು ಬೆಂಬಲಿಸುತ್ತಿದ್ದಾರೆ ಎಂದರು.

2003 ರಲ್ಲಿ ಮನಮೋಹನ್ ಸಿಂಗ್ ಅವರು ಆಗಿನ ಕೇಂದ್ರ ಗೃಹ ಸಚಿವ ಎಲ್ ಕೆ ಅಡ್ವಾಣಿಗೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಅಲ್ಪಸಂಖ್ಯಾತರಿಗೆ ದೇಶದಲ್ಲಿ ಆಶ್ರಯ ಪಡೆಯಲು ಅವಕಾಶ ನೀಡುವಂತೆ ಮನವಿ ಮಾಡಿದ್ದರು ಎಂದು ಹೇಳಿದರು. "ಆದರೆ ಈಗ ನಮ್ಮ ಸರ್ಕಾರ ಅದೇ ಕೆಲಸವನ್ನು ಮಾಡಲು ಕಾನೂನು ಜಾರಿಗೆ ತಂದಾಗ, ಅವರು ಅದನ್ನು ವಿರೋಧಿಸುತ್ತಿದ್ದಾರೆ.

ಭಾರತದಲ್ಲಿ ಮುಸ್ಲಿಮರು ಪ್ರವರ್ಧಮಾನಕ್ಕೆ ಬಂದಿದ್ದಾರೆ. ಆದರೆ ಹಿಂದೂಗಳು ಪಾಕಿಸ್ತಾನದಲ್ಲಿ ಚಿತ್ರಹಿಂಸೆ ಅನುಭವಿಸಿದ್ದಾರೆ ಎಂದು ಬಿಜೆಪಿಯ ಹಿರಿಯ ನಾಯಕ ನಡ್ಡಾ  ಹೇಳಿಕೊಂಡರು,

ವಿವಾದಾತ್ಮಕ ಕಾನೂನು ಪ್ರಮುಖ ರಾಜಕೀಯ ಫ್ಲ್ಯಾಷ್ ಪಾಯಿಂಟ್ ಆಗಿದ್ದು, ಇದನ್ನು ರಾಜ್ಯದಲ್ಲಿ ಜಾರಿಗೆ ತರಲಾಗುವುದಿಲ್ಲ ಎಂದು ಬ್ಯಾನರ್ಜಿ ಘೋಷಿಸಿದ್ದು, ಇದು ಬಿಜೆಪಿಯ ವಿರೋಧಕ್ಕೆ ಕಾರಣವಾಗಿದೆ.

ಕೇಂದ್ರ ಯೋಜನೆಗಳನ್ನು ವಿರೋಧಿಸಿದ್ದಕ್ಕಾಗಿ ಬ್ಯಾನರ್ಜಿಯನ್ನು ದೂಷಿಸಿದ ನಡ್ಡಾ, ರಾಜಕೀಯ ಹಿತರಕ್ಷಣೆಗಾಗಿ  ಆಯುಷ್ಮಾನ್ ಭಾರತ್ ಮತ್ತು ರೈತರಿಗೆ ವಿಮಾ ಯೋಜನೆಯನ್ನು ಬಂಗಾಳದಲ್ಲಿ ಜಾರಿಗೆ ತರಲು ಅವರು ಅನುಮತಿ ನೀಡಲಿಲ್ಲ ಎಂದು ಹೇಳಿದರು.

"ನಾವು ವಿವಾದಾತ್ಮಕ  ಟ್ರಿಪಲ್ ತಲಾಖ್ ಅನ್ನು ತೆಗೆದುಹಾಕಿದ್ದೇವೆ ಮತ್ತು ಮುಸ್ಲಿಂ ಸಹೋದರಿಯರಿಗೆ ಸ್ವಾತಂತ್ರ್ಯವನ್ನು ನೀಡಿದ್ದೇವೆ ಆದರೆ ಅವರು ಅದನ್ನೂ ವಿರೋಧಿಸಿದರು. ಬಿಜೆಪಿಯನ್ನು ವಿರೋಧಿಸುವ ಪ್ರಯತ್ನದಲ್ಲಿ ಅವರು ರಾಷ್ಟ್ರದ ಹಿತಾಸಕ್ತಿಯ ಪ್ರತಿಯೊಂದು ವಿಷಯವನ್ನೂ ವಿರೋಧಿಸುತ್ತಿದ್ದಾರೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News