ಉದ್ಯೋಗ ಸಿಗದ ಆಕ್ರೋಶ: ಜೆಎಸ್ ಡಬ್ಲ್ಯು ಕಂಪೆನಿಯ ಕಚೇರಿ ದ್ವಂಸಗೈದ 200 ಇಂಜಿನಿಯರ್ ಗಳು

Update: 2019-12-24 17:11 GMT

ಹೊಸದಿಲ್ಲಿ: ಕೆಲಸ ನೀಡುವುದಾಗಿ ನೀಡಿದ್ದ ಭರವಸೆಯನ್ನು ಈಡೇರಿಸದ ಕಾರಣ ಸುಮಾರು 200 ಇಂಜಿನಿಯರ್ ಗಳು ಜೆಎಸ್ ಡಬ್ಲ್ಯು ಒಡೆತನದ ಕಂಪೆನಿಯೊಂದರ ಕಚೇರಿಯನ್ನು ದ್ವಂಸಗೈದ ಘಟನೆ ಒಡಿಶಾದಲ್ಲಿ ನಡೆದಿದೆ.

ಈ ವರ್ಷದ ಆರಂಭದಲ್ಲಿ ಕಂಪೆನಿಯು ನೀಡಿದ ಭರವಸೆಯನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಬಿಜು ಪಟ್ನಾಯಕ್ ವಿವಿಯ ವಿದ್ಯಾರ್ಥಿ ಸಂಘದ ಸದಸ್ಯರು ಜೆಎಸ್ ಡಬ್ಲ್ಯು ಒಡೆತನದ ಕಂಪೆನಿಯ ಕಚೇರಿಗೆ ನುಗ್ಗಿದರು. ಕಚೇರಿಯಲ್ಲಿದ್ದ ಪೀಠೋಪಕರಣಗಳು, ಕಂಪ್ಯೂಟರ್ ಗಳು ಮತ್ತು ಕಚೇರಿಯಲ್ಲಿದ್ದ ಇತರ ವಸ್ತುಗಳನ್ನು ಈ ಇಂಜಿನಿಯರ್ ಗಳು ದ್ವಂಸಗೈದಿದ್ದಾರೆ.;

ನಂತರ ಇವರು ಪೊಲೀಸ್ ಠಾಣೆಗೆ ದೂರು ನೀಡಲೆಂದು ತೆರಳಿದರು. ಈ ಸಂದರ್ಭ 8ರಿಂದ 10 ಇಂಜಿನಿಯರ್ ಗಳನ್ನು ಪೊಲೀಸರು ವಶಕ್ಕೆ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News