'ಅಕ್ಷರಸ್ಥರನ್ನು ವಿದ್ಯಾವಂತರನ್ನಾಗಿಸಬೇಕು': ಸತ್ಯಾ ನಡೆಲ್ಲಾ ವಿರುದ್ಧ ಬಿಜೆಪಿ ಸಂಸದೆಯ ಆಕ್ರೋಶ

Update: 2020-01-14 10:40 GMT

ಹೊಸದಿಲ್ಲಿ: "ಸಿಎಎ ಭಾರತಕ್ಕೆ ಒಳ್ಳೆಯದಲ್ಲ'' ಎಂಬ ಮೈಕ್ರೋಸಾಫ್ಟ್ ಸಿಇಒ ಸತ್ಯಾ ನಡೆಲ್ಲಾ ಹೇಳಿಕೆಯಿಂದ ಬಿಜೆಪಿ ನಾಯಕರು ಅಸಮಾಧಾನಗೊಂಡಿದ್ದಾರೆ.

ನಡೆಲ್ಲಾ ಹೇಳಿಕೆ ವಿರುದ್ಧ ಕಿಡಿಕಾರಿರುವ ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ 'ಅಕ್ಷರಸ್ಥರನ್ನು ಶಿಕ್ಷಿತರನ್ನಾಗಿಸಬೇಕಾದ ಪರಿಪೂರ್ಣ ಉದಾಹರಣೆ (ಪರ್ಫೆಕ್ಟ್ ಎಕ್ಸಾಂಪಲ್) ಇದಾಗಿದೆ' ಎಂದು ಹೇಳಿದ್ದಾರೆ.

"ಬಾಂಗ್ಲಾದೇಶ, ಪಾಕಿಸ್ತಾನ ಹಾಗೂ ಅಫ್ಗಾನಿಸ್ತಾನದ ದೌರ್ಜನ್ಯಪೀಡಿತ ಅಲ್ಪಸಂಖ್ಯಾತರಿಗೆ ಅವಕಾಶ ಒದಗಿಸುವುದು ಸಿಎಎ ಹಿಂದಿನ ನಿಖರ ಕಾರಣ. ಅಮೆರಿಕಾದಲ್ಲಿ ಯಜೀದಿಗಳ ಬದಲು ಸಿರಿಯನ್ ಮುಸ್ಲಿಮರಿಗೆ ಅವಕಾಶ ನೀಡಿದರೆ ಹೇಗೆ?'' ಎಂದು ಲೇಖಿ ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News