ಕರ್ನಾಟಕ-ಜಮ್ಮು ಎರಡನೇ ದಿನದಾಟ ಮಳೆಗಾಹುತಿ

Update: 2020-02-21 18:47 GMT

ಜಮ್ಮು, ಫೆ.21: ಕರ್ನಾಟಕ ಹಾಗೂ ಜಮ್ಮು-ಕಾಶ್ಮೀರದ ರಣಜಿ ಟ್ರೋಫಿಯ ಮೂರನೇ ಕ್ವಾರ್ಟರ್ ಫೈನಲ್ ಪಂದ್ಯದ ಎರಡನೇ ದಿನದಾಟ ಒಂದೂ ಎಸೆತ ಕಾಣದೇ ರದ್ದಾಗಿದೆ.

ರಾತ್ರಿ ಇಡೀ ಸುರಿದ ಮಳೆಯಿಂದಾಗಿ ಮೈದಾನದಲ್ಲಿ ನೀರು ತುಂಬಿತ್ತು. ಸಂಜೆ 4 ಗಂಟೆಗೆ ಪಂದ್ಯವನ್ನು ರದ್ದುಪಡಿಸುವ ಮೊದಲು ಅಂಪೈರ್‌ಗಳು ಐದು ಬಾರಿ ಪಿಚ್‌ನ್ನು ಪರೀಕ್ಷಿಸಿದರು. ಮುಂದಿನ ಮೂರು ದಿನಗಳ ಹವಾಮಾನ ಉತ್ತಮವಾಗಿದ್ದು, ಮೊದಲ ಇನಿಂಗ್ಸ್ ಮುನ್ನಡೆಯ ಆಧಾರದಲ್ಲಿ ಫಲಿತಾಂಶ ನಿರ್ಧಾರವಾಗಬಹುದು ಎನ್ನಲಾಗಿದೆ. ಮೊದಲ ದಿನವಾದ ಗುರುವಾರ ಕರ್ನಾಟಕ ತಂಡ 2 ವಿಕೆಟ್ ನಷ್ಟಕ್ಕೆ 14 ರನ್ ಗಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News