ಶರದ್ ಪವಾರ್‌ಗೆ ನೋಟಿಸು ಕಳುಹಿಸುವಂತೆ ಕೋರೆಗಾಂವ್-ಭೀಮಾ ನ್ಯಾಯಾಂಗ ಸಮಿತಿಗೆ ಮನವಿ

Update: 2020-02-21 18:54 GMT

ಪುಣೆ, ಪೆ. 21: 2018ರಲ್ಲಿ ಇಲ್ಲಿಗೆ ಸಮೀಪ ನಡೆದ ಜಾತಿ ಹಿಂಸಾಚಾರದ ಕುರಿತು ಮಾಧ್ಯಮದಲ್ಲಿ ನಿರ್ದಿಷ್ಟ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರಿಗೆ ಸಮನ್ಸ್ ಜಾರಿಗೊಳಿಸುವಂತೆ ಕೋರಿ ಸಲ್ಲಿಸಲಾದ ಮನವಿಯನ್ನು ಭೀಮಾ-ಕೋರೆಗಾವ್ ನ್ಯಾಯಾಂಗ ತನಿಖಾ ಆಯೋಗ ಸ್ವೀಕರಿಸಿದೆ.

ಇಬ್ಬರು ಸದಸ್ಯರ ಆಯೋಗದ ಮುಂದೆ ಹಾಜರಾಗಿ ಹೇಳಿಕೆ ನೀಡುವಂತೆ ಶರದ್ ಪವಾರ್ ಅವರಿಗೆ ಸೂಚಿಸುವಂತೆ ಕೋರಿ ಸಾಮಾಜಿಕ ಸಂಘಟನೆ ವಿವೇಕ್ ವಿಚಾರ್ ಮಂಚ್‌ನ ಸದಸ್ಯ ಸಾಗರ್ ಶಿಂದೆ ವಕೀಲ ಪ್ರದೀಪ್ ಗಾವಡೆ ಮೂಲಕ ಗುರುವಾರ ಮನವಿ ಸಲ್ಲಿಸಿದ್ದರು. ಶರದ್ ಪವಾರ್ ಅವರು ಪೆ. 18ರಂದು ಪತ್ರಿಕಾಗೋಷ್ಠಿ ನಡೆಸಿ ಹೇಳಿಕೆ ನೀಡಿದ್ದರು ಎಂದು ಮನವಿಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News