''ನಿಮ್ಮನ್ನು ನೀವು ಎಷ್ಟಕ್ಕೆ ಮಾರಿಕೊಂಡಿದ್ದೀರಿ ?'' ಕೇಜ್ರಿವಾಲ್‍ಗೆ ಅನುರಾಗ್ ಕಶ್ಯಪ್ ಪ್ರಶ್ನೆ

Update: 2020-02-29 06:45 GMT

ಹೊಸದಿಲ್ಲಿ : ದೇಶದ್ರೋಹ ಪ್ರಕರಣ ಎದುರಿಸುತ್ತಿರುವ ಜವಾಹರಲಾಲ್ ನೆಹರೂ ವಿವಿಯ ವಿದ್ಯಾರ್ಥಿ ಯೂನಿಯನ್‍ನ ಮಾಜಿ ಅಧ್ಯಕ್ಷ ಕನ್ಹಯ್ಯಾ ಕುಮಾರ್ ವಿರುದ್ಧದ ವಿಚಾರಣೆಗೆ ದಿಲ್ಲಿ ಸರಕಾರ ಅನುಮತಿ ನೀಡಿದ ಬೆನ್ನಿಗೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ವಿರುದ್ಧ ವಾಗ್ದಾಳಿ ನಡೆಸಿರುವ ಬಾಲಿವುಡ್ ನಟ, ನಿರ್ದೇಶಕ ಅನುರಾಗ್ ಕಶ್ಯಪ್, ''ಅರವಿಂದ್ ಕೇಜ್ರಿವಾಲ್ ಜೀ,  ಏನು ಹೇಳಲಿ, ಧೈರ್ಯವಿಲ್ಲದವರು (ಸ್ಪೈನ್‍ಲೆಸ್) ಎಂಬ ಪದವೂ ನಿಮಗೆ ಒಂದು ಶ್ಲಾಘನೆಯಾಗಬಹುದು, ನೀವು ಹಾಗೂ ನಿಮ್ಮ ಎಎಪಿ ಅಸ್ತಿತ್ವದಲ್ಲಿಲ್ಲದವರು. ನಿಮ್ಮನ್ನು ನೀವು ಎಷ್ಟಕ್ಕೆ ಮಾರಿಕೊಂಡಿದ್ದೀರಿ ?,''ಎಂದು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

ನಾಲ್ಕು ವರ್ಷ ಹಳೆಯ ದೇಶದ್ರೋಹ ಪ್ರಕರಣದಲ್ಲಿ ಕನ್ಹಯ್ಯಾ ಹಾಗೂ ಒಂಬತ್ತು ಮಂದಿ ಇತರರ ವಿರುದ್ಧ ವಿಚಾರಣೆ ನಡೆಸಲು ದಿಲ್ಲಿ ಪೊಲೀಸರಿಗೆ ಕೇಜ್ರಿವಾಲ್ ಸರಕಾರ ಶುಕ್ರವಾರ ಅನುಮತಿ ನೀಡಿದೆ. ವಿಚಾರಣೆ ನಡೆಸುವುದಕ್ಕೆ ಎಎಪಿ ಅಡ್ಡಗಾಲಿಡುತ್ತಿದೆ ಎಂಬ ಬಿಜೆಪಿ ಆರೋಪವನ್ನು ಪಕ್ಷ ಹಿಂದಿನಿಂದಲೂ ನಿರಾಕರಿಸುತ್ತಲೇ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News