ವಿಕಾಸ್ ದುಬೆ ಆಪ್ತನ ಅಂಗಡಿಯಲ್ಲಿ 7 ಕಚ್ಛಾ ಬಾಂಬ್ ಪತ್ತೆ

Update: 2020-07-10 17:56 GMT

ಲಕ್ನೊ, ಜು.10: ಪೊಲೀಸರ ಎನ್ ಕೌಂಟರ್ ನಲ್ಲಿ ಹತ್ಯೆಯಾದ ಪಾತಕಿ ವಿಕಾಸ್ ದುಬೆಯ ಸಹಚರನಿಗೆ ಸೇರಿದ್ದ ಪಡಿತರ ಅಂಗಡಿಯಿಂದ 7 ಸ್ಥಳೀಯ ನಿರ್ಮಿತ ಕಚ್ಛಾ ಬಾಂಬ್ ಗಳನ್ನು ವಶಕ್ಕೆ ಪಡೆದಿರುವುದಾಗಿ ಕಾನ್ಪುರ ಪೊಲೀಸರು ಹೇಳಿದ್ದಾರೆ.

ಚೌಬೆಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಕ್ರು ಗ್ರಾಮದಲ್ಲಿ ದುಬೆಯ ಸಹಚರ ದಯಾಶಂಕರ್ ಅಗ್ನಿಹೋತ್ರಿ ಎಂಬಾತ ಸರಕಾರಿ ಪಡಿತರ ಅಂಗಡಿಯನ್ನು ಹೊಂದಿದ್ದ. ಈ ಅಂಗಡಿಯಲ್ಲಿ 7 ಕಚ್ಛಾ ಬಾಂಬ್ ಗಳು ಪತ್ತೆಯಾಗಿವೆ. ಈ ಸಂಬಂಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. .

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News