ಮೂವರು ಭಾರತೀಯರೆಡೆಗೆ ಗುಂಡು ಹಾರಿಸಿದ ನೇಪಾಳ ಪೊಲೀಸರು: ಒಬ್ಬರಿಗೆ ಗಂಭೀರ ಗಾಯ

Update: 2020-07-19 17:26 GMT

ಹೊಸದಿಲ್ಲಿ: ಬಿಹಾರದ ಕಿಶನ್ ಗಂಜ್ ನ ಭಾರತ-ನೇಪಾಳ ಗಡಿ ಭಾಗದಲ್ಲಿ ಮೂವರು ಭಾರತೀಯರೆಡೆಗೆ ನೇಪಾಳ ಪೊಲೀಸರು ಗುಂಡು ಹಾರಿಸಿದ್ದು, ಒಬ್ಬ ವ್ಯಕ್ತಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಗಾಯಾಳು ವ್ಯಕ್ತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

25 ವರ್ಷದ ಜಿತೇಂದ್ರ ಕುಮಾರ್ ತನ್ನ ಇಬ್ಬರು ಗೆಳೆಯರಾದ ಅಂಕಿತ್ ಕುಮಾರ್ ಸಿಂಗ್ ಮತ್ತು ಗುಲ್ಶನ್ ಕುಮಾರ್ ಸಿಂಗ್ ಜೊತೆ ಭಾರತ-ನೇಪಾಳ ಗಡಿ ಭಾಗದ ತೋಲಾ ಗ್ರಾಮದಲ್ಲಿ ಜಾನುವಾರುಗಳು ಹುಡುಕಲು ಹೋಗಿದ್ದರು ಎನ್ನಲಾಗಿದೆ.

ಈ ಮೂವರು ಗ್ರಾಮದ ಹೊರಭಾಗದ ಫಾರ್ಮ್ ಕಡೆ ತೆರಳಿದಾಗ ಅಲ್ಲಿದ್ದ ನೇಪಾಳ ಪೊಲೀಸರು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News