ಆಗಸ್ಟ್ 17ರಿಂದ ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ಟಿಡಿಬಿ ಅವಕಾಶ

Update: 2020-08-11 17:48 GMT

ತಿರುವನಂತಪುರ, ಆ.10: ಆಗಸ್ಟ್ 17ರಂದು ಬರುವ ಮಲಯಾಳಂನ ಹೊಸ ವರ್ಷ ಚಿಂಗಂಗೆ ಭಕ್ತರು ದೇವಾಲಯ ಪ್ರವೇಶಿಸಲು ತಿರುವಾಂಕೂರು ದೇವಸ್ವಂ ಮಂಡಳಿ (ಟಿಡಿಬಿ) ಅವಕಾಶ ನೀಡಿದೆ.

ಈ ದಿನ ವಿಶೇಷ ಗಣಪತಿ ಹೋಮ ನಡೆಸಲು ಟಿಡಿಬಿ ನಿರ್ಧರಿಸಿದೆ. ಕೊರೋನ ಶಿಷ್ಟಾಚಾರ ಅನುಸರಿಸುವ ಹಿನ್ನೆಲೆಯಲ್ಲಿ ದೇವಾಲಯದ ಸಂಕೀರ್ಣದ ಒಳಗೆ ಒಂದು ಬಾರಿ ಪ್ರವೇಶಿಸುವ ಭಕ್ತರ ಸಂಖ್ಯೆಯನ್ನು ಐದಕ್ಕೆ ಮಿತಿಗೊಳಿಸಲಾಗಿದೆ. ಮಲೆಯಾಳಂನ ಹೊಸ ವರ್ಷ ಆರಂಭವಾಗುತ್ತಿರುವುದರಿಂದ ವಿಶೇಷ ಗಣಪತಿ ಹೋಮ ನಡೆಸಲು ನಿರ್ಧರಿಸಲಾಗಿದೆ. ಸಾರ್ವಜನಿಕರು ಎಂದಿನಂತೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಬಹುದು ಎಂದು ಟಿಡಿಬಿಯ ಅಧ್ಯಕ್ಷ ಎನ್. ವಾಸು ಹೇಳಿದ್ದಾರೆ.

ಕೊರೋನ ಸಾಂಕ್ರಾಮಿಕ ರೋಗ ಹರಡುತ್ತಿರುವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ದೇವಾಲಯವನ್ನು ನಾಲ್ಕಕ್ಕೂ ಅಧಿಕ ತಿಂಗಳು ಮುಚ್ಚಲಾಗಿತ್ತು. ದೇವಾಲಯದ ಸಲಹಾ ಸಮಿತಿ ಆಚರಣೆ ಹಾಗೂ ಶಿಷ್ಟಾಚಾರದ ಬಗ್ಗೆ ಮಾಹಿತಿ ನೀಡಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News