ನಾನು ಸಗಣಿಯಲ್ಲಿ ಜನಿಸಿದವಳು, ಕೊರೋನ ನನ್ನ ಹತ್ತಿರ ಸುಳಿಯುವುದಿಲ್ಲ ಎಂದ ಸಚಿವೆ!
Update: 2020-09-07 17:47 GMT
ಹೊಸದಿಲ್ಲಿ: ತಾನು ದನದ ಸಗಣಿ ಮತ್ತು ಮಣ್ಣಿನಲ್ಲಿ ಜನಿಸಿದ ಕಾರಣ ಕೊರೋನ ವೈರಸ್ ತನ್ನ ಹತ್ತಿರವೂ ಸುಳಿಯುವುದಿಲ್ಲ ಎಂದು ಮಧ್ಯಪ್ರದೇಶ ಸಚಿವೆ ಇಮಾರ್ತಿ ದೇವಿ ಹೇಳಿದ್ದಾರೆ.
ತನಗೆ ಕೊರೋನ ವೈರಸ್ ತಗಲಿದೆ ಎಂದು ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ ಎಂದವರು ಆರೋಪಿಸಿದರು.
ಗ್ವಾಲಿಯರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ನನಗೆ ಕೊರೋನ ಎಂದು ನೀವು ಮಾತ್ರ ಹೇಳುತ್ತಿದ್ದೀರಿ. ನಾನು ಸಗಣಿ ಮತ್ತು ಮಣ್ಣಿನಲ್ಲಿ ಜನಿಸಿದವಳು. ಕೊರೋನ ನನ್ನ ಹತ್ತಿರವೂ ಸುಳಿಯುವುದಿಲ್ಲ” ಎಂದವರು ಹೇಳಿದರು.
ಇಮಾರ್ತಿ ದೇವಿಯವರ ಈ ಹೇಳಿಕೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
“इमरती मिट्टी-गोबर में पैदा हुई, इतने कर्रे किटाणु है कि कोरोना आसपास नहीं आ पायेगा”
— Rudra R Sharma (@RudraRaviSharma) September 5, 2020
मप्र की महिला एवं बाल विकास मंत्री इमरती देवी
(हाल ही में कांग्रेस से भाजपा में आयी है)@ImartiDevi pic.twitter.com/VT8bazhadg