ನಟಿ ಕಂಗನಾ ಹೇಳಿಕೆ ಮುಂಬೈ ಪೊಲೀಸರಿಗೆ 'ಅವಮಾನ' : ಮಾಜಿ ಸಿಎಂ ಫಡ್ನವೀಸ್

Update: 2020-09-09 05:25 GMT

ಮುಂಬೈ : ಮುಂಬೈ ಪೊಲೀಸರ ಕುರಿತಂತೆ ನಟಿ ಕಂಗನಾ ರಣಾವತ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿರುವ ಬಿಜೆಪಿ ನಾಯಕ ಹಾಗೂ ಮಾಜಿ ಸಿಎಂ ದೇವೇಂದ್ರ ಫಡ್ನವೀಸ್, ಆಕೆಯ ಹೇಳಿಕೆ ಪೊಲೀಸ್ ಇಲಾಖೆಯ 'ಅವಮಾನ'ಕ್ಕೆ ಸಮನಾಗಿದೆ ಎಂದಿದ್ದಾರೆ.

ಸಿನೆಮಾ ಮಾಫಿಯಾಕ್ಕಿಂತ ತನಗೆ ಮುಂಬೈ ಪೊಲೀಸರ ಬಗ್ಗೆ ಭಯವಿದೆ ಹಾಗೂ ತಾವು ಹಿಮಾಚಲ ಪ್ರದೇಶ ಅಥವಾ ಕೇಂದ್ರದಿಂದ ಭದ್ರತೆ ಬಯಸುತ್ತೇನೆ ಎಂದು ಕಂಗನಾ ಹೇಳಿದ್ದರು.

ಈ ಕುರಿತು ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದ ಫಡ್ನವೀಸ್, ತಾವು ರಾಜ್ಯದ ಮುಖ್ಯಮಂತ್ರಿಯಾಗಿ ಐದು ವರ್ಷ ಅಧಿಕಾರದಲ್ಲಿದ್ದುದರಿಂದ  ಮುಂಬೈ ಪೊಲೀಸರ ಸಾಮರ್ಥ್ಯದ ಕುರಿತು ತಮಗೆ ಅರಿವಿದೆ ಎಂದಿದ್ದಾರೆ. ''ಆದರೆ ಪೊಲೀಸರು ರಾಜಕೀಯ ಒತ್ತಡಕ್ಕೆ ಒಳಗಾಗಬಹುದು,'' ಎಂದು ಹೇಳಿದ ಅವರು ಸುಶಾಂತ್ ಸಿಂಗ್ ರಾಜಪುತ್ ಪ್ರಕರಣವನ್ನು ತಪ್ಪಾಗಿ ನಿಭಾಯಿಸಿದ್ದರಿಂದ ಅದರ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News