ಕೆಸರಿನಲ್ಲಿ ಕುಳಿತು ಶಂಖ ಊದಿದರೆ ಕೊರೋನ ಬರುವುದಿಲ್ಲ ಎಂದಿದ್ದ ಬಿಜೆಪಿ ಸಂಸದನಿಗೆ ಕೊರೋನ ಸೋಂಕು

Update: 2020-09-14 17:35 GMT

ಹೊಸದಿಲ್ಲಿ: ಕೆಸರಲ್ಲಿ ಕುಳಿತರೆ ಕೊರೋನ ಬರುವುದಿಲ್ಲ ಎಂದು ಹೇಳಿದ್ದ ರಾಜಸ್ಥಾನದ ಬಿಜೆಪಿ ಸಂಸದ ಸುಖ್ ಬೀರ್ ಸಿಂಗ್ ರಿಗೆ ಕೊರೋನ ವೈರಸ್ ದೃಢಪಟ್ಟಿದೆ.

ಸಂಸತ್ತಿನ ಮುಂಗಾರು ಅಧಿವೇಶನದ ವೇಳೆ ನಡೆದ ಪರೀಕ್ಷೆಯಲ್ಲಿ ಕೊರೋನ ದೃಢಪಟ್ಟ 29 ಸಂಸದರಲ್ಲಿ ಸುಖ್ ಬೀರ್ ಕೂಡ ಒಬ್ಬರು.

ಆಗಸ್ಟ್ ತಿಂಗಳಲ್ಲಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿ ಸುಖ್ ಬೀರ್ ಸಿಂಗ್, ಕೆಸರಿನಲ್ಲಿ ಕುಳಿತರೆ ಮತ್ತು ಶಂಖ ಊದಿದರೆ ಕೊರೋನ ಬರುವುದಿಲ್ಲ ಎಂದಿದ್ದರು.

ಕೆಸರಿನಲ್ಲಿ ಕುಳಿತು, ಮಣ್ಣಿನ ಲೇಪ ಮಾಡಿಕೊಂಡು ಶಂಖ ಊದುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದು ಕೊರೋನ ವೈರಸ್ ವಿರುದ್ಧ ಹೋರಾಡಲು ನೆರವಾಗುತ್ತದೆ ಎಂದವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News