ಪಾಕ್‌ನಿಂದ ಮುಂದುವರಿದ ಕದನ ವಿರಾಮ ಉಲ್ಲಂಘನೆ: ಓರ್ವ ಯೋಧ ಹುತಾತ್ಮ, ಮೂವರು ನಾಗರಿಕರು ಸಾವು

Update: 2020-11-14 17:40 GMT

ಹೊಸದಿಲ್ಲಿ, ನ. 14: ಉತ್ತರ ಜಮ್ಮು ಹಾಗೂ ಕಾಶ್ಮೀರದ ಗಡಿ ನಿಯಂತ್ರಣ ರೇಖೆಯ ಹಲವು ಪ್ರದೇಶದಲ್ಲಿ ಪಾಕಿಸ್ತಾನ ಸೇನೆ ಕದನ ವಿರಾಮ ಉಲ್ಲಂಘಿಸಿ ಗುಂಡು ಹಾಗೂ ಮೋರ್ಟಾರ್ ಸೆಲ್ ದಾಳಿ ನಡೆಸಿರುವುದನ್ನು ಮುಂದುವರಿಸಿದ್ದು, ಮತ್ತೊರ್ವ ಯೋಧ ಹುತಾತ್ಮರಾಗಿದ್ದಾರೆ. ಅಲ್ಲದೆ, ಮತ್ತೆ ಮೂವರು ನಾಗರಿಕರು ಮೃತಪಟ್ಟಿದ್ದಾರೆ.

ವಿವಿಧ ಪ್ರದೇಶಗಳಲ್ಲಿ ಪಾಕಿಸ್ತಾನ ಸೇನೆ ಶನಿವಾರ ನಡೆಸಿದ ದಾಳಿಗೆ ಮೂವರು ಯೋಧರು ಹಾಗೂ ಬಿಎಸ್‌ಎಫ್‌ನ ಸಬ್ ಇನ್ಸ್‌ಪೆಕ್ಟರ್ ಹುತಾತ್ಮರಾಗಿದ್ದರು. ಅಲ್ಲದೆ ಮೂವರು ನಾಗರಿಕರು ಮೃತಪಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News