ರೈತರ ಬಗೆಗಿನ ಟ್ವೀಟ್‌: ಕಂಗನಾಗೆ ಎರಡನೇ ಕಾನೂನು ನೋಟಿಸ್

Update: 2020-12-04 18:17 GMT

ಹೊಸದಿಲ್ಲಿ: ಬಾಲಿವುಡ್ ನಟಿ ಕಂಗನಾ ರಣಾವತ್ ಪ್ರತಿಭಟನಾ ನಿರತ ಹಿರಿಯ ರೈತ ಮಹಿಳೆಯ ಕುರಿತು ಮಾಡಿರುವ ಟ್ವೀಟ್‌ಗೆ ದಿಲ್ಜಿತ್ ದೊಸಾಂಜ್ ಮಾತ್ರವಲ್ಲ ಪಂಜಾಬ್‌ನ ಇತರ ಕಲಾವಿದರು, ದಿಲ್ಲಿ ಸಿಖ್ ಗುರುದ್ವಾರ ಆಡಳಿತ ಮಂಡಳಿಯು ಶುಕ್ರವಾರ ಕ್ಷಮೆ ಕೋರುವಂತೆ ಆಗ್ರಹಿಸಿದೆ.

ಟ್ವಿಟ್ಟರ್‌ನಲ್ಲಿ ದಿಲ್ಜಿತ್‌ರೊಂದಿಗೆ ವಾಗ್ವಾದ ನಡೆಸಿ ಸುದ್ದಿಯಾಗಿದ್ದ ರಣಾವತ್‌ಗೆ ದಿಲ್ಲಿ ಸಿಖ್ ಗುರುದ್ವಾರ ಆಡಳಿತ ಮಂಡಳಿಯು ಶುಕ್ರವಾರ ಕಾನೂನು ನೋಟಿಸ್ ನೀಡಿದೆ. ನಟಿಯಿಂದ ಬೇಷರತ್ ಕ್ಷಮೆ ಯಾಚಿಸುವಂತೆ ಕೋರಿದೆ.

ರಣಾವತ್ ಅವರ ಟ್ವೀಟ್‌ಗಳು ರೈತರ ಪ್ರತಿಭಟನೆಯನ್ನು ದೇಶ ವಿರೋಧಿ ಎಂದು ಬಿಂಬಿಸುವ ಯತ್ನವಾಗಿದೆ. ಆಕೆ ರೈತನ ವೃದ್ದ ತಾಯಿಯ ಕುರಿತು ಅವಹೇಳನಕಾರಿ ಟ್ವೀಟ್ ಮಾಡಿದ್ದರು ಎಂದು ದಿಲ್ಲಿ ಸಿಖ್ ಗುರುದ್ವಾರ ಆಡಳಿತ ಮಂಡಳಿಯ ಅಧ್ಯಕ್ಷ ಮಣಿಂದರ್ ಸಿರ್ಸಾ ಹೇಳಿದ್ದಾರೆ.

 ನಟಿಗೆ ಇದು ಎರಡನೇ ಕಾನೂನು ನೋಟಿಸ್ ಆಗಿದೆ. ಈಕೆಗೆ ಈಗಾಗಲೇ ಪಂಜಾಬ್‌ನ ಝಿರಾಕ್‌ಪುರ ಪಟ್ಟಣದ ವಕೀಲರೊಬ್ಬರು ಡಿ.2 ರಂದು ನೋಟಿಸ ಜಾರಿಗೊಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News