ಜಾನುವಾರು ಕಳ್ಳ ಸಾಗಣೆ ಪ್ರಕರಣ: ಟಿಎಂಸಿ ನಾಯಕನ ನಿವಾಸದ ಮೇಲೆ ಸಿಬಿಐ ದಾಳಿ

Update: 2020-12-31 17:42 GMT

ಕೊಲ್ಕತ್ತಾ: ಜಾನುವಾರು ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ ಇಂದು ತೃಣಮೂಲ ಕಾಂಗ್ರೆಸ್ ಯುವ ನಾಯಕ ವಿನಯ್ ಮಿಶ್ರಾ ಅವರ ನಿವಾಸಗಳ ಮೇಲೆ ಸಿಬಿಐ ದಾಳಿ ನಡೆಸಿದೆ.

ಮಿಶ್ರಾ ಅವರು ತೃಣಮೂಲ ಕಾಂಗ್ರೆಸ್ ಯೂತ್ ವಿಂಗ್ ಅಧ್ಯಕ್ಷ ಮತ್ತು ಸಿಎಂ ಮಮತಾ ಬ್ಯಾನರ್ಜಿಯವರ ಸಂಬಂಧಿ ಅಭಿಷೇಕ್ ಬ್ಯಾನರ್ಜಿಯವರ ಆಪ್ತ ಎಂದು ಹೇಳಲಾಗಿದೆ. ಪ್ರಕರಣದ ಆರೋಪಿ ಇನಾಮುಲ್ ಹಕ್ ನಿಂದ ಮಿಶ್ರಾ ಕೋಟಿಗಟ್ಟಲೆ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ.

“ಮಿಶ್ರಾ ಈಗ ತಲೆಮರೆಸಿಕೊಂಡಿದ್ದು, 2019ರಲ್ಲಿ ಕೆಲ ಕಾಲ ದುಬೈಯಲ್ಲಿದ್ದ. ಹಕ್ ಕೂಡ ಕೆಲಕಾಲ ಬಾಂಗ್ಲಾದಲ್ಲಿದ್ದ” ಎಂದು ಸಿಬಿಐ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News