ಸಂಕ್ರಾಂತಿಯಂದು ಪ್ರತಿಭಟನಾನಿರತ ರೈತರಿಗೆ ವಿಶೇಷ ಶುಭಾಶಯ ಕೋರಿದ ರಾಹುಲ್ ಗಾಂಧಿ

Update: 2021-01-14 05:44 GMT

ಹೊಸದಿಲ್ಲಿ:ಪೊಂಗಲ್, ಮಕರ ಸಂಕ್ರಾಂತಿ ಹಾಗೂ ಮಾಘ್ ಬಿಹು ಸಂದರ್ಭದಲ್ಲಿ ದೇಶದ ಜನರಿಗೆ ಶುಭ ಹಾರೈಸಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟಿಸುತ್ತಿರುವ ರೈತರಿಗೆ ವಿಶೇಷ ಪ್ರಾರ್ಥನೆ ಹಾಗೂ ಶುಭಾಶಯ ಕೋರಿದ್ದಾರೆ.
ಸಂಕ್ರಾಂತಿ ಸುಗ್ಗಿಯು ಸಂತೋಷ ಹಾಗೂ ಸಂಭ್ರಮಾಚರಣೆಯ ಸಮಯವಾಗಿದೆ. ಮಕರ ಸಂಕ್ರಾಂತಿ, ಪೊಂಗಲ್, ಬಿಹು, ಭೋಗಿ ಹಾಗೂ ಉತ್ತರಾಯನ್‍ಗೆ ಎಲ್ಲರಿಗೂ ಶುಭಾಶಯಗಳು. ಪ್ರಬಲ ಶಕ್ತಿಗಳ ವಿರುದ್ಧ ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕಿಸಾನ್-ಮಜ್ದೂರ್ ಗಳಿಗೆ ವಿಶೇಷ ಪ್ರಾರ್ಥನೆ ಹಾಗೂ ಶುಭಾಶಯಗಳು ಎಂದು ರಾಹುಲ್ ಟ್ವೀಟ್ ಮಾಡಿದ್ದಾರೆ.
ರಾಹುಲ್ ಇಂದು ತಮಿಳುನಾಡಿಗೆ ಭೇಟಿ ನೀಡಲಿದ್ದು, ವಿವಾದಾತ್ಮಕ ಗೂಳಿಕಾಳಗ ‘ಜಲ್ಲಿಕಟ್ಟು’ ವೀಕ್ಷಿಸಲಿದ್ದಾರೆ. 
ನಿಮ್ಮೊಂದಿಗೆ ಪೊಂಗಲ್ ಆಚರಿಸಲು ತಮಿಳುನಾಡಿಗೆ ಬರುತ್ತಿರುವೆ. ಮದುರೈನಲ್ಲಿ ಜಲ್ಲಿಕಟ್ಟು ಹಬ್ಬದಲ್ಲಿ ಭಾಗವಹಿಸುವೆ ಎಂದು ತಮಿಳಿನಲ್ಲಿ ರಾಹುಲ್ ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News