ನಂದಿಗ್ರಾಮದಿಂದ ಸ್ಪರ್ಧೆ: ಮಮತಾ ಬ್ಯಾನರ್ಜಿ ಮಹತ್ವದ ಘೋಷಣೆ

Update: 2021-01-18 14:21 GMT

ಕೋಲ್ಕತಾ,ಜ.18: ಮುಂಬರಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಪೂರ್ವ ಮೇದಿನಿಪುರ ಜಿಲ್ಲೆಯ ನಂದಿಗ್ರಾಮದಿಂದ ತಾನು ಕಣಕ್ಕಿಳಿಯುವುದಾಗಿ ಪ.ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸೋಮವಾರ ಇಲ್ಲಿ ರ್ಯಾಲಿಯೊಂದರಲ್ಲಿ ಪ್ರಕಟಿಸಿದರು.

 ಕಳೆದ ತಿಂಗಳು ಬಿಜೆಪಿಗೆ ಸೇರ್ಪಡೆಗೊಂಡಿರುವ ಮಾಜಿ ಟಿಎಂಸಿ ನಾಯಕ ಸುವೇಂದು ಅಧಿಕಾರಿ 2016ರಲ್ಲಿ ನಂದಿಗ್ರಾಮದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದರು.

2011ರ ಚುನಾವಣೆಗಳ ಸಂದರ್ಭದಲ್ಲಿ ಪ್ರಭಾವಿ ನಾಯಕ ಅಧಿಕಾರಿ ನೆರವಿನಿಂದ ನಂದಿಗ್ರಾಮದಲ್ಲಿ ಕೃಷಿಕರ ಭೂಮಿಯ ಸ್ವಾಧೀನದ ವಿರುದ್ಧ ಪ್ರಚಾರ ನಡೆಸಿದ್ದ ಬ್ಯಾನರ್ಜಿ 34 ವರ್ಷಗಳ ಎಡರಂಗ ಸರಕಾರವನ್ನು ಪದಚ್ಯುತಗೊಳಿಸುವಲ್ಲಿ ಸಫಲರಾಗಿದ್ದರು.

ಬ್ಯಾನರ್ಜಿ ಹಾಲಿ ದಕ್ಷಿಣ ಕೋಲ್ಕತಾದ ಭವಾನಿಪುರ ಶಾಸಕಿಯಾಗಿದ್ದಾರೆ. ತಾನು ಎರಡೂ ಕ್ಷೇತ್ರಗಳಿಂದ ಸ್ಪರ್ಧಿಸಬಹುದು ಎಂದ ಅವರು,ನಂದಿಗ್ರಾಮ ತನ್ನ ಅದೃಷ್ಟದ ಸ್ಥಳವಾಗಿದೆ ಎಂದರು.

ಅಧಿಕಾರಿ ಸೇರಿದಂತೆ ಬಿಜೆಪಿಯನ್ನು ಸೇರುತ್ತಿರುವ ಪಕ್ಷದ ನಾಯಕರ ಬಗ್ಗೆ ತಾನು ತಲೆ ಕೆಡಿಸಿಕೊಂಡಿಲ್ಲ ಎಂದು ಹೇಳಿದ ಅವರು, ಟಿಎಂಸಿ ಅಧಿಕಾರಕ್ಕೆ ಮರಳುವ ವಿಶ್ವಾಸವನ್ನು ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News