ಉ.ಪ್ರ. ಪ್ರಿಯಾಂಕಾ ಗಾಂಧಿ ಅವರ ಬೆಂಗಾವಲು ವಾಹನಗಳು ಢಿಕ್ಕಿ

Update: 2021-02-04 18:35 GMT

ಹಾಪುರ್, ಫೆ. 5: ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಬೆಂಗಾವಲು ವಾಹನದಲ್ಲಿ ಮೂರರಿಂದ ನಾಲ್ಕು ವಾಹನಗಳು ಪಶ್ಚಿಮ ಉತ್ತರಪ್ರದೇಶದ ಹಾಪುರ್ ಜಿಲ್ಲೆಯ ಹೆದ್ದಾರಿಯಲ್ಲಿ ಗುರುವಾರ ಢಿಕ್ಕಿಯಾಗಿವೆ.

ಗರ್ಹ್‌ ಮುಖ್ತೇಶ್ವರ ಪ್ರದೇಶದಲ್ಲಿ ಸಂಭವಿಸಿದ ಈ ಅಪಘಾತದಲ್ಲಿ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ. ಎಸ್‌ಯುವಿ ವಾಹನ ಸೇರಿದಂತೆ ವಾಹನಗಳು ಪ್ರಿಯಾಂಕಾ ಗಾಂಧಿ ಅವರ ಕಾರನ್ನು ಅನುಸರಿಸುತ್ತಿತ್ತು.

ಕಾಂಗ್ರೆಸ್‌ನ ಉತ್ತರಪ್ರದೇಶ ಘಟಕದ ವರಿಷ್ಠ ಅಜಯ್ ಕುಮಾರ್ ಲಲ್ಲು ಅವರೊಂದಿಗೆ ಪ್ರಿಯಾಂಕಾ ಗಾಂಧಿ ಅವರು ದಿಲ್ಲಿಯ ರೈತರ ಪ್ರತಿಭಟನೆ ಸಂದರ್ಭ ಮೃತಪಟ್ಟ ದಿಬ್ದಿಬಾ ಗ್ರಾಮದ ನಿವಾಸಿ ನವರೀತ್ ಸಿಂಗ್ ಅವರ ಶ್ರಾದ್ಧದಲ್ಲಿ ಪಾಲ್ಗೊಳ್ಳಲು ರಾಮ್‌ಪುರಕ್ಕೆ ತೆರಳುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News