ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ ಬಂಧನ

Update: 2021-04-22 18:17 GMT

ತಿರುವನಂತಪುರ, ಎ. 22: ಸೋಲಾರ್ ಹಗರಣದ ಆರೋಪಿ ಸರಿತಾ ನಾಯರ್ ಅವರನ್ನು ಚೆಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಗುರುವಾರ ಬಂಧಿಸಿದ್ದಾರೆ. ವಾರಂಟ್ ಜಾರಿಗೊಳಿಸಿದರೂ ನ್ಯಾಯಾಲಯದ ಮಂದೆ ಹಾಜರಾಗದ ಹಿನ್ನೆಲೆಯಲ್ಲಿ ಸರಿತಾ ನಾಯರ್ ಅವರನ್ನು ಬಂಧಿಸಲಾಗಿದೆ. ಸರಿತಾ ನಾಯರ್ ಅನ್ನು ಬಂಧಿಸಲು ಕೋಝಿಕೋಡ್ ಕಸಬಾ ಪೊಲೀಸರು ಇಂದು ಬೆಳಗ್ಗೆ ತಿರುವನಂತಪುರಕ್ಕೆ ತಲುಪಿದ್ದರು ಹಾಗೂ ಬಂಧಿಸಿದರು ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News