ಕೊರೋನದ 3ನೇ ಅಲೆಗೆ ಸಿದ್ದರಾಗಿರಬೇಕು: ಕೇಂದ್ರ ಸರಕಾರ

Update: 2021-05-05 12:54 GMT

 ಹೊಸದಿಲ್ಲಿ: ದೇಶದಲ್ಲಿ ಮಾರಕ ಕೊರೋನದ 2ನೇ ಅಲೆ ಈಗಾಗಲೇ ತನ್ನ ಭೀಕರತೆಯನ್ನು ತೋರಿಸುತ್ತಿದ್ದು, ಇದರ ನಡುವೆ ಮೂರನೇ ಅಲೆಯನ್ನು ಎದುರಿಸುವುದು ಅನಿವಾರ್ಯ ಎಂಬ ಆತಂಕಕಾರಿ ವಿಷಯವನ್ನು ಬುಧವಾರ ಕೇಂದ್ರ ಸರಕಾರ ಹೇಳಿದೆ.

ಆದರೆ ಈ ಹಂತ ಯಾವ ಸಮಯದಲ್ಲಿ ಹಾಗೂ ಯಾವ ಪ್ರಮಾಣದಲ್ಲಿ ಸಂಭವಿಸುತ್ತದೆ ಎನ್ನುವುದು ಸ್ಪಷ್ಟವಾಗಿಲ್ಲ. ಹೀಗಾಗಿ ನಾವು ಅದಕ್ಕೆ ಸಿದ್ದರಾಗಿರಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ಕೊರೋನದ ಹೊಸ ಅಲೆಯ ಕುರಿತು ಮಾತನಾಡಿದ ಕೇಂದ್ರದ ಪ್ರಧಾನ ವೈಜ್ಞಾನಿಕ ಸಲಹೆಗಾರ ಕೆ.ವಿಜಯರಾಘವನ್ “ವೈರಸ್ ನ ಹೊಸ ರೂಪಾಂತರಗಳು ಹೆಚ್ಚು ಹರಡುತ್ತವೆ. ಆರೋಗ್ಯ ಸಚಿವಾಲಯವು ಪ್ರಸ್ತುತ ಕೋವಿಡ್-19 ಪರಿಸ್ಥಿತಿ ಹಾಗೂ ರಾಜ್ಯದಲ್ಲಿ ನಡೆಯುತ್ತಿರುವ ಲಸಿಕಾ ಕಾರ್ಯಕ್ರಮದ ಕುರಿತು ಸಂಕ್ಷಿಪ್ತ ಮಾಹಿತಿ ನೀಡಿದೆ’’ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News