ಅಂಬಾನಿ ಸೆಕ್ಯುರಿಟಿ ಬೆದರಿಕೆ ಪ್ರಕರಣ: ಆರೋಪಿ ಸಚಿನ್ ವಾಝೆ ಖಾಯಂ ವಜಾ
Update: 2021-05-11 15:24 GMT
ಮುಂಬೈ: ಕೈಗಾರಿಕೋದ್ಯಮಿ ಮುಖೇಶ್ ಅಂಬಾನಿಯ ಮುಂಬೈ ಮನೆಯ ಹೊರಗೆ ಸ್ಫೋಟಕಗಳನ್ನು ಇರಿಸಿದ ಅವರ ಪಾತ್ರದ ಬಗ್ಗೆ ತನಿಖೆ ಎದುರಿಸುತ್ತಿರುವ ಅಮಾನತುಗೊಂಡ ಪೊಲೀಸ್ ಅಧಿಕಾರಿ ಸಚಿನ್ ವಾಝೆ ಅವರನ್ನು ಮಂಗಳವಾರ ಶಾಶ್ವತವಾಗಿ ವಜಾ ಮಾಡಲಾಗಿದೆ.
ಸಂವಿಧಾನದ ನಿಬಂಧನೆಗಳನ್ನು ಉಲ್ಲೇಖಿಸಿ ವಾಝೆ ಅವರನ್ನು ಸೇವೆಯಿಂದ ವಜಾಗೊಳಿಸಲು ಮುಂಬೈ ಪೊಲೀಸ್ ಆಯುಕ್ತರ ಕಚೇರಿ ಆದೇಶ ಹೊರಡಿಸಿದೆ.
"ಎಪಿಐ ಸಚಿನ್ ಹಿಂದೂರಾವ್ ವಾಝೆ ಅವರನ್ನು ಪೊಲೀಸ್ ಸೇವೆಯಿಂದ ವಜಾಗೊಳಿಸಲಾಗಿದೆ. ಗ್ರೇಟರ್ ಮುಂಬೈನ ಪೊಲೀಸ್ ಆಯುಕ್ತರು 311 (2) (ಬಿ) ಭಾರತದ ಸಂವಿಧಾನದ ಅಡಿಯಲ್ಲಿ ಇಂದು ಆದೇಶ ಹೊರಡಿಸಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾರೆ.