ಲಾಕ್ ಡೌನ್ ನಿಯಮ ಉಲ್ಲಂಘನೆ: ಪಶ್ಚಿಮ ಬಂಗಾಳದ ಮೂವರು ಬಿಜೆಪಿ ಶಾಸಕರು ಪೊಲೀಸ್ ವಶಕ್ಕೆ‌

Update: 2021-05-16 16:48 GMT

ಸಿಲಿಗುರಿ,ಮೇ 16: ಲಾಕ್ಡೌನ್ ನಿಯಮಗಳನ್ನು ಉಲ್ಲಂಘಿಸಿದ ಆರೋಪದಲ್ಲಿ ರವಿವಾರ ಇಲ್ಲಿ ಮೂವರು ಬಿಜೆಪಿ ಶಾಸಕರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ಬಳಿಕ ಅವರನ್ನು ಬಿಡುಗಡೆಗೊಳಿಸಿದ್ದಾರೆ.

ಶಂಕರ ಘೋಷ್, ಆನಂದ್ಮಯ ಬರ್ಮನ್ ಮತ್ತು ಶಿಖಾ ಚಟ್ಟೋಪಾಧ್ಯಾಯ ಅವರು ಉತ್ತರ ಬಂಗಾಳದಲ್ಲಿ ಹೆಚ್ಚುತ್ತಿರುವ ಕೋವಿಡ್-19 ಸಾವುಗಳನ್ನು ನಿಯಂತ್ರಿಸುವಲ್ಲಿ ರಾಜ್ಯ ಸರಕಾರದಿಂದ ಕ್ರಮಗಳ ಕೊರತೆಯ ವಿರುದ್ಧ ಇಲ್ಲಿಯ ಸಫ್ದರ್ ಹಾಷ್ಮಿ ಚೌಕ್ನಲ್ಲಿ ಧರಣಿ ನಡೆಸುತ್ತಿದ್ದರು.

ಪ್ರತಿಭಟನೆ ಸಂದರ್ಭ ತಾವು ಎಲ್ಲ ಕೋವಿಡ್-19 ನಿಯಮಗಳನ್ನು ಪಾಲಿಸಿದ್ದೆವು ಮತ್ತು ಸ್ಥಳದಲ್ಲಿ ಜನರು ಸೇರಿರಲಿಲ್ಲ ಎಂದು ಶಾಸಕರು ಹೇಳಿದ್ದರೆ,ಲಾಕ್ಡೌನ್ ಮಧ್ಯೆ ಧರಣಿಯನ್ನು ನಡೆಸುವ ಮೂಲಕ ಈ ಶಾಸಕರು ಪ್ರದೇಶದ ಜನರಿಗೆ ದ್ರೋಹ ಬಗೆದಿದ್ದಾರೆ ಎಂದು ಹಿರಿಯ ಟಿಎಂಸಿ ನಾಯಕ ಗೌತಮ್ ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News