ಪಂಜಾಬ್ ಕಾಂಗ್ರೆಸ್ ಬಿಕ್ಕಟ್ಟು:ಅಮರಿಂದರ್ ಸಿಂಗ್ ಭೇಟಿಗೆ ಚಂಡೀಗಡಕ್ಕೆ ಧಾವಿಸಿದ ಹರೀಶ್ ರಾವತ್

Update: 2021-07-17 06:04 GMT

ಹೊಸದಿಲ್ಲಿ:  ಪಂಜಾಬ್ ಕಾಂಗ್ರೆಸ್  ಉಸ್ತುವಾರಿ ಹರೀಶ್ ರಾವತ್ ಅವರು  ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರನ್ನು ಭೇಟಿ ಮಾಡಲು ರಾಜ್ಯ ಸರಕಾರದ ವಿಮಾನವನ್ನೇರಿ ಇಂದು ಚಂಡೀಗಡಕ್ಕೆ ಧಾವಿಸಿದ್ದಾರೆ.

ಪಂಜಾಬ್ ಕಾಂಗ್ರೆಸ್  ಪಕ್ಷದ ಘಟಕದಲ್ಲಿ ಬಿಕ್ಕಟ್ಟು ಮುಂದುವರೆದಿದೆ. ಬಿಕ್ಕಟ್ಟನ್ನು  ಹತ್ತಿಕ್ಕುವ ಸಲುವಾಗಿ ಕ್ರಿಕೆಟಿಗ-ರಾಜಕಾರಣಿ ನವಜೋತ್ ಸಿಂಗ್ ಸಿಧು ಅವರಿಗೆ ಬಡ್ತಿ ನೀಡಬಹುದೆಂದು ವರದಿಯ  ಕೆಲವೇ ಗಂಟೆಗಳ ನಂತರ ಹಿರಿಯ ನಾಯಕ ರಾವತ್  ಪಂಜಾಬ್ ಗೆ ತೆರಳಿದ್ದಾರೆ.

ಅಮರಿಂದರ್  ಸಿಂಗ್ ಅವರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಸಿಧು ಅವರನ್ನು ನೇಮಿಸಲಾಗುವುದು ಎಂಬ ವರದಿಯನ್ನು ಆಕ್ಷೇಪಿಸಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಪತ್ರ ಬರೆದ ಮರುದಿನವೇ ರಾವತ್  ಅವರು ಚಂಡೀಗಡಕ್ಕೆ ವಿಮಾನದಲ್ಲಿ  ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News