ಸಾಂಕ್ರಾಮಿಕದ ವರ್ಷದಲ್ಲಿ ಆಕ್ಸಿಜನ್ ರಫ್ತು ಶೇ. 700ರಷ್ಟು ಏರಿಕೆಯಾಗಿತ್ತು : ಸರಕಾರದ ವಿರುದ್ಧ ಪ್ರಿಯಾಂಕಾ ವಾಗ್ದಾಳಿ

Update: 2021-07-21 12:40 GMT

ಹೊಸದಿಲ್ಲಿ : ಕೋವಿಡ್ ಎರಡನೇ ಅಲೆ ಸಂದರ್ಭ ಆಕ್ಸಿಜನ್ ಕೊರತೆಯಿಂದ ಸಾವುಗಳು ಸಂಭವಿಸಿಲ್ಲ ಎಂದು ರಾಜ್ಯಸಭೆಯಲ್ಲಿ ಸರಕಾರ ನೀಡಿದ ಹೇಳಿಕೆಯ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರ, ಸರಕಾರ ಸಾಂಕ್ರಾಮಿಕದ ವರ್ಷ ಆಕ್ಸಿಜನ್ ರಫ್ತನ್ನು ಹೆಚ್ಚಿಸಿದ್ದರಿಂದ ಹಾಗೂ ಸಾಂಕ್ರಾಮಿಕದ ಸಂದರ್ಭ ಆಕ್ಸಿಜನ್ ಸಾಗಾಟಕ್ಕೆ ಟ್ಯಾಂಕರ್ ಗಳ ಏರ್ಪಾಟು ಮಾಡದ ಕಾರಣ ಸಾವುಗಳು ಸಂಭವಿಸಿದ್ದವು ಎಂದು ಹೇಳಿದ್ದಾರೆ.

"ಸರಕಾರ ಸಾಂಕ್ರಾಮಿಕದ ವರ್ಷದಲ್ಲಿ ಆಕ್ಸಿಜನ್ ರಫ್ತನ್ನು ಶೇ700ರಷ್ಟು ಏರಿಕೆ ಮಾಡಿತ್ತು ಹಾಗೂ ಉನ್ನತಾಧಿಕಾರ ಮತ್ತು ಸಂಸದೀಯ ಸಮಿತಿಯ ಸಲಹೆಯನ್ನು ನಿರ್ಲಕ್ಷ್ಯಿಸಿ ಆಕ್ಸಿಜನ್ ಸಾಗಾಟಕ್ಕೆ ಟ್ಯಾಂಕರುಗಳನ್ನು ಒದಗಿಸಿಲ್ಲ" ಎಂದು ಅವರು ಆರೋಪಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News